ರಾಜ್ಯದಲ್ಲಿ ಜನರ ಕೆಲಸವಾಗಬೇಕೆಂದರೆ ದಾರ್ಷ್ಟ್ಯ ಮನೋಭಾವದ ಸರ್ಕಾರ ತೊಲಗಿ ಜನಪರ ಸರ್ಕಾರ ಬರಬೇಕು ಎಂದರು. ಜಿ.ಪಂ.ಮಾಜಿ ಸದಸ್ಯ ಷಣ್ಮುಖಬೋವಿ ಮಾತನಾಡಿ, ಜೆಡಿಎಸ್ ಕೊಟ್ಟ ಮಾತಿನಂತೆ ನಡೆದಿದ್ದರೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತಿರಲಿಲ್ಲ. ರಾಜ್ಯಕ್ಕೆ ಮತ್ತು ಕ್ಷೇತ್ರಕ್ಕೆ ನಿಷ್ಠಾವಂತ ರಾಜಕಾರಣಿಗಳ ಅಗತ್ಯವಿದ್ದು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಮಲ್ಲಿಕಾರ್ಜುನರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಿ.ಜಿ.ಬಸಪ್ಪ, ಕೋಡಿಹಳ್ಳಿ ರಂಗಪ್ಪ, ಮರುಳಸಿದ್ದಪ್ಪ, ನಾಗರಾಜ್ ಮುಂತಾದವರು ಮಾತನಾಡಿದರು.
ಮುಖಂಡರಾದ ಎಚ್.ಹಾಲಪ್ಪ, ಕೆ.ಎಲ್.ವಿಜಯಕುಮಾರ್, ಎಸ್.ಶರತ್, ಎಂ.ಪಿ.ಸುದರ್ಶನ್,ಕುಮಾರ ಸ್ವಾಮಿ, ವಿಶ್ವನಾಥ್, ಡಿ.ಆರ್.ಗುರುನಾಥ್, ಎಂ.ಪಿ.ದಯಾನಂದ್ ಮುಂತಾದವರು ಇದ್ದರು.