ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ ದರ್ಪಣ / ಕೃಷಿ ದರ್ಪಣ

Last Updated 2 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಚಿತ್ರ ಕಲಾವೈಭವ
‘ ವಿಜಯನಗರದ ಭಿತ್ತಿ ಚಿತ್ರಕಲೆ’ (ಲೇ: ಕೆ.ವಿ. ಸುಬ್ರಹ್ಮಣ್ಯಂ) ಲೇಖನ ವಿಜಯನಗರ ಕಾಲದ ಚಿತ್ರಕಲಾ ವೈಭವವನ್ನು ನೆನಪಿಸಿತು. ಇತಿಹಾಸದ ನೆನಪುಗಳನ್ನು ತಂದು ಕೊಡುವ ಸ್ಮಾರಕಗಳನ್ನು ಭವಿಷ್ಯದ ಪೀಳಿಗೆಗಾಗಿ ಸಂರಕ್ಷಿಸಬೇಕು. ಇದಕ್ಕೆ ಸರ್ಕಾರದ ಬೆಂಬಲದ ಅಗತ್ಯವಿದೆ.
- ಸರ್ಪಭೂಷಣ, ಅರಸೀಕೆರೆ.

ಚಿತ್ರ ಕಲಾ ಪರಂಪರೆ

ಕೆ.ವಿ. ಸುಬ್ರಹ್ಮಣ್ಯಂ ಅವರ ಲೇಖನದಲ್ಲಿ ವಿಜಯನಗರ ಕಾಲದ ಭಿತ್ತಿ ಚಿತ್ರಕಲೆಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಲೇಖನ ಓದಿ ಸಂತಸವಾಯಿತು. ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬದಂತಿರುವ ಭಿತ್ತಿ ಚಿತ್ರಕಲೆಯನ್ನು ರಕ್ಷಿಸಬೇಕು.
- ಅಭಿನಂದನ್ ಎನ್. ಅಚ್ಮನಿ, ರಾಣೆಬೆನ್ನೂರು.

ಉಕ್ಕಿ ಹರಿದ ಭಕ್ತಿ 
‘ಶಕ್ತಿ ಕ್ಷೇತ್ರ ಕೊಲ್ಲೂರು’ (ಲೇ: ರಾಮಕೃಷ್ಣ ಸಿದ್ರಪಾಲ) ಲೇಖನ ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಭಕ್ತಿ ಭಾವ ಮೂಡಿತು. ಲೇಖನ ಕೊಲ್ಲೂರಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
- ವಿ. ಹೇಮಂತ ಕುಮಾರ್, ಬೆಂಗಳೂರು.

ವಿಶಿಷ್ಟ ಜಾತ್ರೆ
ನಾಗರಾಜ ಹಬ್ಬು ಅವರ ‘ರಂಗೋಲಿ ಜಾತ್ರೆ’ ಲೇಖನ ಚೆನ್ನಾಗಿತ್ತು. ಇದು ನಿಜಕ್ಕೂ ವಿಶಿಷ್ಟ ಜಾತ್ರೆ. ರಾಜಕೀಯ ಮುಖಂಡರು, ಸಾಮಾಜಿಕ ಕ್ಷೇತ್ರದ ಗಣ್ಯರು, ಸಿನಿಮಾ ನಟ-ನಟಿಯರು, ಕ್ರಿಕೆಟ್ ತಾರೆಯರನ್ನು ರಂಗೋಲಿ ಕಲೆಯಲ್ಲಿ ಮೂಡಿಸುವುದು ಅಚ್ಚರಿಯ ಸಂಗತಿ.
- ಡಿ. ಯೋಗೇಶ್, ಓಬತ್ಲಾನಹಳ್ಳಿ.

ಅಭಿನಂದನೀಯ
‘ಸಾಧನೆಗೆ ಸಂದ ಪ್ರಶಸ್ತಿ’ (ಲೇ: ಜಿ. ಚಂದ್ರಕಾಂತ) ಲೇಖನ ಅರ್ಥಪೂರ್ಣವಾಗಿತ್ತು. ಬರಡು ಭೂಮಿಯನ್ನು ಫಲವತ್ತಾದ ನೀರಾವರಿ ಭೂಮಿಯನ್ನಾಗಿ ಪರಿವರ್ತಿಸಿರುವ ಭೀಮಹಳ್ಳಿಯ ರೈತ ಶಿವಲಿಂಗಪ್ಪ ಚೋರಗತ್ತಿ ಅವರ ಪ್ರಯತ್ನ ಅಭಿನಂದನೀಯ.
- ನಾಗೇಂದ್ರಕುಮಾರ್ ನಂಜನಗೂಡು

ಪ್ರಶಂಸಾರ್ಹ
ಹೂವಿನ ನಡುವೆ ತರಕಾರಿಗಳನ್ನು ಬೆಳೆಯುವ ಪ್ರಯೋಗದಲ್ಲಿ ಯಶಸ್ಸನ್ನು ಸಾಧಿಸಿರುವ ಸುಳ್ಯದ ಜಯಂತಿ ಅವರ ಪ್ರಯತ್ನ ಪ್ರಶಂಸಾರ್ಹ.
- ಎಂ.ಎಸ್. ಲಕ್ಷ್ಮಣ್, ದಾವಣಗೆರೆ

ಸಕಾಲಿಕ
‘ಕಡಿಮೆ ಖರ್ಚಿನಲ್ಲಿ ಸಮೃದ್ಧ ಫಸಲು’ (ಲೇ: ಎನ್.ಎಂ. ನಟರಾಜು) ಲೇಖನ ಸಕಾಲಿಕ. ನಾಗಸಂದ್ರದ ಚೆನ್ನಬಸಣ್ಣ ಅವರು ಕಡಿಮೆ ನೀರು ಬಳಸಿಕೊಂಡು ಅಡಿಕೆ ಬೆಳೆಯಲ್ಲಿ ಹೆಚ್ಚಿನ ಫಸಲು ಪಡೆಯುತ್ತಿರುವುದು, ಇತರರಿಗೆ ಮಾದರಿಯಾಗಿದೆ.
- ಪಿ. ದಿನೇಶ್, ಸುಗ್ಗನಹಳ್ಳಿ

ಸಂಪೂರ್ಣ ಮಾಹಿತಿ
ಸಹನಾ ಕಾಂತಬೈಲು ಅವರ ಮರತೊಂಡೆ ಕುರಿತ ಲೇಖನ ಚೆನ್ನಾಗಿದೆ. ಮರತೊಂಡೆ ಇರುವುದು ನನಗೆ ಗೊತ್ತಿರಲಿಲ್ಲ.
- ಹಾಲೇಶ್, ಹೊನ್ನಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT