ಇದರಲ್ಲಿ ಮಹದೇವ ಶಂಕರನಪುರ ಅವರ `ಉರಿಗದ್ದಿಗೆ ಮೇಲೆ ಬೋಳು ಜಂಗಮನ ತಂಬೂರಿ ಪದ~ ( ಕಾವ್ಯ), ಬಿ.ಟಿ. ಮುನಿರಾಜಯ್ಯ ಅವರ `ಕಾಟಮಲ್ಲ~ (ನಾಟಕ), ಉಮೇಶ್ ತಿಮ್ಮಾಪುರ ಅವರ `ನಡುಹಗಲ ಸಂಜೆ~ (ಕಥೆ), ಡಾ. ನಲ್ಲಿಕಟ್ಟೆ ಸಿದ್ದೇಶರ `ವೃಕ್ಷಮಾತೆ ಸಾಲುಮರದ ತಿಮ್ಮಕ್ಕ~ (ಜೀವನಚರಿತ್ರೆ), ಡಾ. ಹನುಮಂತರಾವ್ ದೊಡ್ಡಮನಿ ಅವರ `ಪಂಚಮ~ (ಆತ್ಮಕತೆ), ಡಾ. ಶಿವಾನಂದ ಕೆಳಗಿನಮನಿ ಅವರ `ಮಾದಿಗ ಲಿಂಗಾಯಿತರು-ಸಾಂಸ್ಕೃತಿಕ ಅಧ್ಯಯನ~ (ಸಂಶೋಧನೆ), ಡಾ. ಇಂದಿರಮ್ಮ ಎಸ್. ಅವರ `ಮಾತುಪ್ರತಿಮಾತು~ (ವಿಮರ್ಶೆ), ಡಾ.ಎಸ್.ನರೇಂದ್ರಕುಮಾರ್ರ `ಬೋಧಿ ನೆಲದ ಮಾತು~ (ಸಂಕೀರ್ಣ), ಡಾ. ಸೂರ್ಯಕಾಂತ ಸುಜ್ಯಾತ್ರ `ಗುಲಾಮಗಿರಿ~ (ಅನುವಾದ) ಹಾಗೂ ಡಾ. ಸಣ್ಣವೀರಪ್ಪ ದೊಡ್ಡಮನಿ ಅವರ `ಕಂಗಳ ಮುಂದಣ ಕತ್ತಲೆ~ (ಲೇಖಕರ ಮೊದಲ ಕೃತಿ) ಆಯ್ಕೆಯಾಗಿದೆ. ಈ ಪ್ರಶಸ್ತಿಗಳನ್ನು ಕೊಪ್ಪಳ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್ನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನಲಗೆರೆ ಹೊಂಬಯ್ಯ ತಿಳಿಸಿದ್ದಾರೆ.