ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಏಕೆ ಕೊಟ್ಟಿಲ್ಲ?

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸೂರ್ಯನಗರ 2ನೇ ಹಂತದಲ್ಲಿ ಎಂಐಜಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. (377-ಎಂಐಜಿ ಸೆಕ್ಟರ್-ಬಿ ಆದರೆ, ಈ ಮನೆಗಳನ್ನು ಪಡೆದುಕೊಂಡವರು ದಿನವೂ ಹಾರುವ ಸಾಹಸಕ್ಕೆ ಕೈ ಹಾಕಬೇಕಿದೆ. ಕಾರಣ: ಮನೆಯ ಒಳಗೆ ಹೋಗಲು ಮನೆಯ ಮುಂದಿರುವ ಡ್ರೈನೇಜ್ ಜಿಗಿಯಬೇಕು. ಅದಕ್ಕೆ ಮುಚ್ಚಳವೇ ಇಲ್ಲ. ಜಿಗಿಯುವಾಗ ಆಯತಪ್ಪಿದರೆ ಅದರೊಳಕ್ಕೆ ಬೀಳುವ ಅಪಾಯ.

ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಮುಚ್ಚಳ ಇನ್ನೂ ಮಂಜೂರಾಗಿಲ್ಲ ಎಂಬ ಸಿದ್ಧ ಉತ್ತರ ಸಿಗುತ್ತದೆ. ಇಲ್ಲಿನ ಎಲ್ಲ ಮನೆಗಳ ಬಾಗಿಲು ಮುಂದೆಯೂ ತೆರೆದ ಚರಂಡಿ ಇದೆ. ಇದು ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಆದ್ದರಿಂದ ನಾಗರಿಕರ ಆರೋಗ್ಯದ ದೃಷ್ಟಿಯಿಂದಲಾದರೂ ಸಂಬಂಧಿಸಿದವರು ತೆರೆದ ಒಳಚರಂಡಿ ಮೇಲೆ ಮುಚ್ಚಳ ಹಾಕಿಸಿ ಕೊಡಬೇಕೆಂದು ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT