ಹಟ್ಟಿ ಚಿನ್ನದ ಗಣಿ: `ಕೈಗಾರಿಕೆಗಳ ಸ್ಥಾಪನೆಗೆ ಅರಣ್ಯ ನಾಶ ಮಾಡಲಾಗಿದೆ. ಪರಿಸರ ನಾಶವಾಗಲು ಆಧುನೀಕರಣ, ನಗರೀಕರಣ ಜನಸಂಖ್ಯೆ ಸ್ಫೋಟ ಪ್ರಮುಖ ಕಾರಣ' ಎಂದು ಹಟ್ಟಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಬಸಮ್ಮ ಪರಮೇಶ ಹೇಳಿದರು.
ಸೋಮವಾರ ಇಲ್ಲಿನ ವಿನಾಯಕ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಸಿರುಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿನಾಯಕ ವಿದ್ಯಾ ಸಂಸ್ಥೆಯ ಸಂಸ್ಥಾಪಕ ನರಸಪ್ಪ ಯಾದವ್ ಮಾತನಾಡಿ, ಪರಿಸರ ಹಾನಿ ತುಂಬಲು ಹಸಿರು ಬೆಳೆಸಬೇಕು. ಹಸಿರು ನಾಶದ ಪರಿಣಾಮ ಭೂಮಿಯ ಮೇಲ್ಮೈ, ಒಳಮೈಯಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಪರಿಸರ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು ಎಂದು ಹೇಳಿದರು.
ಉಪನ್ಯಾಸಕ ಪ್ರಭು ಬಡಿಗೇರ, ಶಂಶುದ್ದೀನ್ ವಕೀಲ, ಮಹೇಂದ್ರ ಕುರ್ಡಿಗಿ, ವಿದ್ಯಾರ್ಥಿಗಳಾದ ಉಮಾ ದೇವಿ, ಸಂಗಮ್ಮ, ಕವಿತಾ ಪರಿಸರದ ಕುರಿತ ಅನಿಸಿಕೆ ವ್ಯಕ್ತಪಡಿಸಿದರು.
ಶೇಖರಪ್ಪ ಬಡಿಗೇರ, ಉಪನ್ಯಾಸಕರು, ಶಿಕ್ಷಕರು ಇದ್ದರು. ಶ್ವೇತಾ ನಿರೂಪಿಸಿ, ಅಂಜಲಿ ಸ್ವಾಗತಿಸಿ, ಸೈಯದ್ ರಿಯಾಜ ಖಾದ್ರಿ ವಂದಿಸಿದರು.