ಬೆಳ್ತಂಗಡಿ: ಇಲ್ಲಿನ ತಾಲ್ಲೂಕು ಕ್ರೀಡಾಂಗಣದ ಬಳಿ ಹೊಳೆಯಲ್ಲಿ ಭಾನುವಾರ ಸ್ನಾನಕ್ಕೆಂದು ಇಳಿದ ನಾಲ್ವರು ಬಾಲಕರು ಆಯ ತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಸ್ಥಳೀಯ ಸಂಜಯ ನಗರದ ನಿವಾಸಿಗಳಾದ ಜಾವೀದ್ (12), ಜಂಶೀರ್ (7), ಸೈಯದ್ ಸಾಸೀರ್ (12) ಮತ್ತು ಮೊಹಮ್ಮದ್ ಅಫೀರ್ (12) ಮೃತಪಟ್ಟವರು. ಎಲ್ಲರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.
ಬಂಧುಗಳ ಆಕ್ರಂದನ ಮುಗಿಲುಮುಟ್ಟಿತ್ತು. ಮಹಮ್ಮದ್ ಶರೀಫ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.