ನರಸಿಂಗಾಪುರ: ತಾಲ್ಲೂಕಿನ ನರಸಿಂಗಾ ಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ನಿರ್ಮಲಾ ಮಂಜುನಾಥ್(ಪರಿಶಿಷ್ಟ ಪಂಗಡ), ಉಪಾಧ್ಯಕ್ಷರಾಗಿ ಉಮಾಪತಿ (ಸಾಮಾನ್ಯ) ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 25 ಸದಸ್ಯರಲ್ಲಿ 24 ಸದಸ್ಯರು ಹಾಜರಿದ್ದು ಏಕಪಕ್ಷೀಯವಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬೆಂಬಲ ಸೂಚಿಸಿದರು.
ತಾಲ್ಲೂಕು ಬಿ.ಎಸ್.ಆರ್. ಪಕ್ಷದ ಮುಖಂಡರಾದ ನವಲೂಟಿ ಗಂಗಣ್ಣ, ಆರ್.ಧನುಂಜಯ, ಎಚ್. ಕುಮಾರ ಸ್ವಾಮಿ, ವಿಜಯ್ ಸಿಂಗ್, ವಿರೇಶ್ ರಣಜಿತ್ಪುರ, ಎಂ.ಪಂಪಾಪತಿ ಸರಸಾಪುರ, ಬಿ.ನಾಗರಾಜ್, ರಾಮನ ಗೌಡ್ರು, ಓಬಳೇಶ್, ವೆಂಕಟೇಶಲು, ಸರೋಜಾ ದೇವಿ, ದುರುಗಮ್ಮ, ಕಲ್ಪನ ಹಾಜರಿದ್ದರು.