ಬೆಂಗಳೂರು: ಸನಾತನ ಕಲಾ ಕ್ಷೇತ್ರವು ಭಾರತೀಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಕರ್ನಾಟಕಕ್ಕೆ ಅಂತರರಾಷ್ಟ್ರೀಯ ಕೀರ್ತಿಯನ್ನು ತಂದಿದೆ ಎಂದು ಸಂಗೀತ ವಿದುಷಿ ಶ್ಯಾಮಲಾ ಜಿ.ಭಾವೆ ಹೇಳಿದರು.
ಸನಾತನ ಕಲಾಕ್ಷೇತ್ರವು ಇತ್ತೀಚೆಗೆ ಏರ್ಪಡಿಸಿದ್ದ `ನಾಟ್ಯ ಕಲಾ ಕೌಶಲಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗೀತ ವಿದ್ವಾಂಸ ಪಿ.ಸಿ.ಸುಬ್ರಹ್ಮಣ್ಯ ಅವರಿಗೆ `ನಾಟ್ಯಕಲಾ ಕೌಶಲಿ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.