ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಪೂರ್ಣ ಸಮನ್ವಯದೊಂದಿಗೆ ತಂಡಗಳಲ್ಲಿ ಪ್ರದರ್ಶಿಸಿದ ನೃತ್ಯ ಪ್ರಸಂಗಗಳು ಕಣ್ಣು ಕಿವಿಗಳಿಗೆ ಹಬ್ಬವನ್ನುಂಟು ಮಾಡಿದವು. ಹಾಡುಗಾರಿಕೆಯನ್ನು ಕಲಿಯುತ್ತಿರುವ ಮಕ್ಕಳು `ನಮ ರಾಮಾಯಣ~, `ಜಗದಾನಂದಕರ~, `ಧರಣಿ ತೆಲುಸುಕೊಂಟಿ~ ಮೊದಲಾದ ಜನಪ್ರಿಯ ಕೀರ್ತನೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.
ನೃತ್ಯ ಕಲಾವಿದರು ಪುಷ್ಪಾಂಜಲಿ, ಅಲರಿಪ್ಪು ದೇವರನಾಮ ಮತ್ತು ಉತ್ತುಕ್ಕಡು ವೆಂಕಟಕವಿಯ ಸಪ್ತರತ್ನ `ಜಟಾಧರ ಶಂಕರ~ವನ್ನು ಲಾಲಿತ್ಯಪೂರ್ಣವಾಗಿ ಪ್ರಯೋಗಿಸಿದರು. ಹಿರಿಯ ಗುರುಗಳಾದ ವಿದುಷಿ ನೀಲಾ ರಾಮ್ಗೋಪಾಲ್ ಮತ್ತು ಗುರು ಬಿ ಭಾನುಮತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.