ಪಾಟೀಲ ಪುಟ್ಟಪ್ಪನವರ ಲೇಖನ (ಪ್ರ. ವಾ. ಡಿ. 19 `ಸಂಗತ') ಮಾಹಿತಿ ಪೂರ್ಣವಾಗಿದೆ. ಕೇರಳದವರು ಸದ್ದಿಲ್ಲದೇ, `ಕಾಸರಗೋಡನ್ನು' ಜಿಲ್ಲೆಯಾಗಿ ಪರಿವರ್ತಿಸಿ ಅದು ಕರ್ನಾಟಕಕ್ಕೆ ಸೇರದಂತೆ ಮಾಡಿದ್ದಾರೆ.
ನಮ್ಮವರ ಅಸಡ್ಡೆಯಿಂದ ಮರಾಠಿಗರಿಗೆ ಬೆಳಗಾವಿಯ ಮೇಲೆ ಹಕ್ಕು ಸಾಧಿಸಲು ಅನುಕೂಲವಾಗಿದೆ. ಹೇಗೂ ಬೆಳಗಾವಿಯಲ್ಲಿ ಧೈರ್ಯ ಮಾಡಿ `ಸುವರ್ಣ ವಿಧಾನಸೌಧ' ನಿರ್ಮಾಣ ಮಾಡಿ, ಮರಾಠಿಗರಿಗೆ ಬೆಳಗಾವಿಯ ಆಸೆ ಬಿಡುವಂತೆ ಮಾಡಿದ್ದಾರೆ. ಇದು ಶ್ಲಾಘನೀಯ ಸಾಧನೆ.
ಡಾ. ಪಾಟೀಲ ಪುಟ್ಟಪ್ಪನವರ ಸಲಹೆಯಂತೆ, ಖರ್ಚು ವೆಚ್ಚಗಳಿಗೆ ಅಂಜದೇ ಮುಖ್ಯಮಂತ್ರಿಗಳು ಇದೇ ಬಜೆಟ್ ಅಧಿವೇಶನದಲ್ಲಿ ನಿಪ್ಪಾಣಿ ಜಿಲ್ಲೆಯನ್ನು ಘೋಷಿಸಲಿ.