ಬೆಂಗಳೂರು: ಗಾಂಧೀಜಿಯವರ ಆದರ್ಶಗಳು ಎಂದಗೂ ಅನುಕರಣೀಯವಾಗಿವೆ. ಮುಂದಿನ ಪೀಳಿಗೆಯು ಭೂಮಿಯ ಮೇಲೆ ಇಂತಹ ವ್ಯಕ್ತಿ ಇದ್ದನೆಂದು ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ ಎಂದು ಶಾಸಕ ನೆ.ಲ. ನರೇಂದ್ರಬಾಬು ಹೇಳಿದರು.
ಬಸವೇಶ್ವರ ನಗರ ನಾಗರಿಕ ಸಮಿತಿ ಮತ್ತು ಒಕ್ಕಲಿಗರ ವೇದಿಕೆಯು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ `ಮಹಾತ್ಮ ಗಾಂಧೀಜಿ ನುಡಿ ನಮನ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯ ತತ್ವಗಳು ಸದ್ದಿಲ್ಲದೆ ಮರೆಯಾಗುತ್ತಿವೆ. ನಮ್ಮ ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.