ಅದು ಶುರುವಾದದ್ದು ಯಾವಾಗ?
ಸುಮಾರು ಕ್ರಿ.ಶ. 9ನೇ ಶತಮಾನದಲ್ಲಿ ಈ ಕಲೆಯು ಹುಟ್ಟಿತು. ಪ್ರದರ್ಶನ ಕಲಾವಿದರ ಮುಖಂಡ ಕತೆ ಹೇಳುವ ಕ್ರಮವನ್ನು `ಕೂತ್ತು' ಎಂದು ಕರೆಯುತ್ತಾರೆ. ಕತೆ ಹೇಳುವ ಮುಖಂಡವನ್ನು `ಚಾಕ್ಯಾರ್' ಎನ್ನುತ್ತಾರೆ. ಖುದ್ದು ನಟ, ನಾಟಕಕಾರನಾಗಿದ್ದ ಪೆರುಮಾಳ್ ದೊರೆ ಕುಲಶೇಖರ ಹಾಗೂ ಅವನ ಆಸ್ಥಾನದಲ್ಲಿದ್ದ ಮಂತ್ರಿ, ಕವಿ ತೋಲನ್ `ಕೂತ್ತು' ಕಲೆಯನ್ನು ಕೂಡಿಯಾಟ್ಟಂ ಆಗಿ ಪರಿವರ್ತಿಸಿದವರಲ್ಲಿ ಪ್ರಮುಖರು.