ಸರ್ಕಾರದಿಂದ ಮಂಜೂರಾಗಿರುವ ಮನೆಗಳು ಅಲ್ಪಸಂಖ್ಯಾತ ಬಡವರಿಗೆ ಸಿಗಬೇಕು ಎನ್ನುವುದು ತಮ್ಮ ಪ್ರಮುಖ ಬೇಡಿಕೆ. ಈ ಬಗ್ಗೆ ತಾಲ್ಲೂಕು ಪಂಚಾಯ್ತಿ ಇಒ ಗಮನಕ್ಕೆ ತಂದಿದ್ದೇವೆ. ಸಮಸ್ಯೆ ಪರಿಹಾರದ ಭರವಸೆ ಸಿಕ್ಕಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಫಕೃದ್ದೀನ್ ಸಾಬ್, ಶುಕೂರ್ ಸಾಬ್, ಹಬೀಬ್, ಹಯಾತ್, ಸೈಯದ್, ಕೆ.ಎಲ್. ಗೋವಿಂದರಾಜು, ಮಹಾಂತೇಶ್, ರಂಗನಾಥ್, ಚಂದ್ರಪ್ಪ, ರಂಗಪ್ಪ, ಕುಮಾರ್, ಮಕ್ಸೂದ್, ಮೂಡಲಗಿರಿಯಪ್ಪ, ರಸೂಲ್ಸಾಬ್, ಈರಣ್ಣ, ತಿಮ್ಮಣ್ಣ ತಿಳಿಸಿದರು.