ಕೊಲೆ ಮಾಡಿದ ನಂತರ ಆರೋಪಿ ತನ್ನ ಅಣ್ಣ ಮೋಹನಾಂಗಯ್ಯ ಸ್ವಾಮಿ ಅವರಿಗೆ ಮಾಹಿತಿ ನೀಡಿದ. ಸ್ಥಳಕ್ಕೆ ಧಾವಿಸಿದ ಅವರಿಗೆ ಮನೆಯಲ್ಲಿ ಮಮತಾ ಅವರು ಶವವಾಗಿ ಬಿದ್ದಿರುವುದು ಕಂಡುಬಂತು. ಅವರು ತಕ್ಷಣ ಉರ್ವ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಬಳಿಕ ಆರೋಪಿಯನ್ನು ಬಂಧಿಸಿದರು. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.