ನವದೆಹಲಿ (ಪಿಟಿಐ): ಪರಮಾಣು ತ್ಯಾಜ್ಯ ಸಂಗ್ರಹಣೆಗಾಗಿ ದೇಶವು ಆಳವಾದ ನೆಲಮಾಳಿಗೆ ಪ್ರದೇಶಗಳ ಅನ್ವೇಷಣೆಯಲ್ಲಿ ತೊಡಗಿದೆ.
ಪರಮಾಣು ಇಂಧನ ಇಲಾಖೆಯು ತನ್ನ ಯುರೇನಿಯಂ ಗಣಿಯೊಂದಲ್ಲಿ ನೆಲಮಾಳಿಗೆ ಪ್ರಯೋಗಾಲಯ ನಿರ್ಮಿಸಲಿದ್ದು, ಪರಮಾಣು ತ್ಯಾಜ್ಯ ಸಂಗ್ರಹಣೆಗಾಗಿ ಗಣಿಯ ತಳದ ಬಂಡೆಗಳ ಗುಣಮಟ್ಟವನ್ನು ಪರಿಶೀಲಿಸಲಿದೆ.
`ಸ್ಥಿರವಾಗಿರುವ, ಬಿರುಕಿಲ್ಲದ ಅಭೇದ್ಯ ಶಿಲಾ ರಚನೆಗಾಗಿ ನಾವು ಅನ್ವೇಷಣೆ ಮಾಡುತ್ತಿದ್ದೇವೆ~ ಎಂದು ಪರಮಾಣು ಇಂಧನ ಆಯೋಗದ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ಪ್ರಸ್ತುತ ಮುಂಬೈ ಬಳಿಯ ತಾರಾಪುರದಲ್ಲಿರುವ ಘನ ತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.