ಬೆಳಗಾವಿ: ರಾಜ್ಯ ಸರ್ಕಾರವು ಮಹಾನಗರಪಾಲಿಕೆ ಪರಿಷತ್ ಅನ್ನು ವಿಸರ್ಜನೆ ಮಾಡಿರುವುದನ್ನು ಪ್ರಶ್ನಿಸಿ ಧಾರವಾಡ ಸಂಚಾರಿ ಹೈಕೋರ್ಟ್ ಪೀಠಕ್ಕೆ ಶುಕ್ರವಾರ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಕಳೆದ ಪರಿಷತ್ ಸಭೆಯ ಸದಸ್ಯರಾಗಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಬೆಂಬಲಿತ ಸದಸ್ಯ ಸಂಜೀವ ಪ್ರಭು ಹಾಗೂ ಬೆಳಗಾವಿ ಅಭಿವೃದ್ಧಿ ವೇದಿಕೆಯ ಸದಸ್ಯ ದೀಪಕ ವಘೇಲಾ ಸಲ್ಲಿಸಿರುವ ಅರ್ಜಿಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಪಾಲಿಕೆ ಆಯುಕ್ತರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ. ರಾಜ್ಯ ಸರ್ಕಾರ ನೀಡಿದ್ದ ನೋಟಿಸ್ಗೆ ಸರಿಯಾಗಿ ಉತ್ತರ ನೀಡಲಾಗಿತ್ತು. ಆ ನಂತರವೂ ವಿಸರ್ಜನೆ ಮಾಡಿರುವುದನ್ನು ನೋಡಿದರೆ ಕಾರಣ ಬೇರೆ ಎನಿಸುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಸಂಜೀವ ಪ್ರಭು `ಪ್ರಜಾವಾಣಿ~ಗೆ ತಿಳಿಸಿದರು