ಒಂದೇ ಲಯದ ಬೂಟಿನ ಸಪ್ಪಳ. ಸೆಟೆದ ಎದೆಗಳಲ್ಲಿ ಬಸಿದ ಬೆವರು ಬೆಳೆದ ಆತ್ಮವಿಶ್ವಾಸ. ತೂಕದ ಬಂದೂಕುಗಳನ್ನು ಹಿಡಿದು ಬಾಗುವಾಗಲೂ ಎಲ್ಲರದ್ದೂ ಒಂದೇ ಲಯ-ಗತಿ. ಉತ್ತರಾಖಂಡದಲ್ಲಿ ಪ್ರವಾಹ ಬಂದಿತ್ತಲ್ಲ; ಅಂಥ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವವರನ್ನು ರಕ್ಷಿಸುವುದು ಹೇಗೆ ಎಂದು ಕೇಂದ್ರ ಮೀಸಲು ಪಡೆಯವರಿಗೆ ತರಬೇತಿ ನೀಡಲಾಗುತ್ತದೆ.
ಅದು ತರಬೇತಿಯ ಒಂದು ಭಾಗವಷ್ಟೆ. ಅಂಥ ಹಲವು ಸವಾಲುಗಳಿಗೆ ಎದುರಾಗಿ ನಿಲ್ಲಬಲ್ಲ ಗಂಡೆದೆಯನ್ನು ಈ ತರಬೇತಿ ಮೂಡಿಸುತ್ತದೆ. ಹೀಗೆ ತರಬೇತಿ ಮುಗಿಸಿದ ಸುಮಾರು 942 ಕೆಡೆಟ್ಗಳು ನಗರದ ಯಲಹಂಕದಲ್ಲಿ ಮಂಗಳವಾರ (ಜುಲೈ 9) ಪೆರೇಡ್ ಮಾಡಿದರು. ಕಸರತ್ತುಗಳನ್ನು ಪ್ರದರ್ಶಿಸಿದರು.
ಆ ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾದವರ ನಡುವೆ ಪುಟ್ಟ ಕಂದಮ್ಮ ಎದ್ದುಕಾಣುತ್ತಿತ್ತು.