ಅಹಮದಾಬಾದ್(ಪಿಟಿಐ): ಗುಜರಾತ್ ರಾಜ್ಯ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಆ ರಾಜ್ಯದಲ್ಲಿ ‘ಪೊರಕೆ ಯಾತ್ರೆ’ ಹಮ್ಮಿಕೊಳ್ಳುವುದಾಗಿ ಹೇಳಿದೆ.
ಯಾತ್ರೆಯನ್ನು ಮುಂದಿನ ಜ.26 ರಂದು ಆರಂಭಿಸಲಾಗುವುದು. ಯಾತ್ರೆ ಯಲ್ಲಿ ಗುಜರಾತ್ ಸರ್ಕಾರದ ಭ್ರಷ್ಟಾಚಾರವನ್ನು ಹೊರಗೆಳೆಯುತ್ತೇವೆ. ರಾಜ್ಯದ ರಾಜ್ಯಕಾರಣವನ್ನು ಸ್ವಚ್ಛಗೊಳಿಸುತ್ತೇವೆ’ ಎಂದು ಎಎಪಿಯ ದಿನೇಶ್ ವಘೇಲಾ ಹೇಳಿದ್ದಾರೆ.