ಕಳ್ಳತನ, ವಂಚನೆ, ಕೊಲೆ, ಸುಲಿಗೆ, ಅಪಹರಣ, ಲೈಂಗಿಕ ದೌರ್ಜನ್ಯಗಳಿಗೆ ಕುಖ್ಯಾತವಾಗಿರುವ ಬೆಂಗಳೂರು ಮಹಾನಗರದಲ್ಲಿ ಅಂಥ ಕ್ಲಿಷ್ಟ, ಸೂಕ್ಷ್ಮ ಪ್ರಕರಣಗಳನ್ನು ಭೇದಿಸುವಲ್ಲಿ ಬೆಂಗಳೂರಿನ ಪೊಲೀಸರು ತಮ್ಮ ಚಾಣಾಕ್ಷತೆ, ಜಾಣತನ, ಸಾಮರ್ಥ್ಯಗಳನ್ನು ತೋರಿಸುತ್ತಿದ್ದಾರೆ. ಬೆಂಗಳೂರಿಗರ ಬದುಕನ್ನು ಭಯ, ಆತಂಕಗಳಿಂದ ಮುಕ್ತವಾಗಿಸಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.
ಇಂಥವರಲ್ಲಿ ಕೆಲವರನ್ನಾದರೂ ಗುರುತಿಸಿ `ಕೆಂಪೇಗೌಡ ಪ್ರಶಸ್ತಿ' ನೀಡಿ ಗೌರವಿಸುವ ಕೆಲಸವನ್ನು ಬಿ.ಬಿ.ಎಂ.ಪಿ. ಮಾಡದಿರುವುದು ಅದರ ಕರ್ತವ್ಯಲೋಪಕ್ಕೆ ಹಿಡಿದ ಕನ್ನಡಿಯಾಗಿದೆ.