ನವದೆಹಲಿ (ಪಿಟಿಐ): ಸರಕು ಸಾಗಣೆ ಮತ್ತು ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಸಚಿವೆ ಮಮತಾ ಬ್ಯಾನರ್ಜಿ ಮಂಡಿಸಿರುವ ರೈಲ್ವೆ ಬಜೆಟ್ ವೆುಚ್ಚುವಂತಹದ್ದಾಗಿದ್ದು, ಹಣದುಬ್ಬರ ಇಳಿಕೆಗೆ ಇದು ಸಹಾಯವಾಗಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು.
ಈ ಬಜೆಟ್ ಸಾಮಾನ್ಯ ಜನರ ಪರವಾಗಿದ್ದು, ಬೆಲೆ ಏರಿಕೆಯನ್ನು ನಿಯಂತ್ರಿಸಿ ಹಣದುಬ್ಬರ ಹೆಚ್ಚಾಗದಂತೆ ನೋಡಿಕೊಳ್ಳಲಾಗಿದೆ ಎಂದು ಲೋಕಸಭೆಯಲ್ಲಿ ಮಮತಾ ಬಜೆಟ್ ಮಂಡಿಸಿದ ನಂತರ ಪ್ರಧಾನಿಯವರು ಸಂಸತ್ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ದುಸ್ಥಿತಿಯಲ್ಲಿರುವ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಂಡಿದ್ದು, ಇದರಿಂದ ಆರ್ಥಿಕ ಪ್ರಗತಿಯಾಗಲಿದೆ ಎಂದು ಅವರು ನುಡಿದರು.