ಬನಹಟ್ಟಿ: ನಗರದ ಹೊರವಲಯದ ಅರಳಿಕಟ್ಟೆಯಲ್ಲಿ ಗುರುವಾರ ದೇವರನ್ನು ಊರೊಳಗೆ ಕರೆದುಕೊಳ್ಳುವ ವಿಶಿಷ್ಟವಾದ `ಐದೇಶಿ' ಕಾರ್ಯಕ್ರಮವನ್ನು ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಐದೇಶಿ ಎಂದರೆ ಐದು ದಿನಗಳ ಕಾರ್ಯಕ್ರಮ. ಯುಗಾದಿಯ ದಿನದಂದು ನೆರೆಯ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಮಲ್ಲಿಕಾರ್ಜುನ ದೇವರ ಜಾತ್ರೆಯನ್ನು ಮುಗಿಸಿಕೊಂಡು ಜನರು ಮತ್ತೆ ನಗರಕ್ಕೆ ಮರಳುತ್ತಾರೆ.