ನವದೆಹಲಿ (ಪಿಟಿಐ): ಸಂಸದೀಯ ಸ್ಥಾಯಿ ಸಮಿತಿಗಳಿಗೆ ವಿವಾದಾತ್ಮಕ ಸಂಸತ್ ಸದಸ್ಯರಾದ ಎ. ರಾಜಾ ಹಾಗೂ ಸುರೇಶ್ ಕಲ್ಮಾಡಿ ಅವರನ್ನು ನೇಮಿಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಭ್ರಷ್ಟಾಚಾರ ತೊಡೆಯುವಲ್ಲಿ ಕಾಂಗ್ರೆಸ್ ಗಂಭೀರವಾಗಿಲ್ಲ ಎಂಬುದನ್ನು ಇದು ತೋರಿಸಿಕೊಟ್ಟಿದೆ ಎಂದು ಬಿಜೆಪಿ ಹೇಳಿದೆ.
ಆದರೆ, ತನ್ನ ನಿರ್ಧಾರ ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಸಂಸದೀಯ ಸ್ಥಾಯಿ ಸದಸ್ಯರಾಗುವುದು ಸಂಸತ್ ಸದಸ್ಯರ ಹಕ್ಕಾಗಿದೆ ಎಂದು ತಿಳಿಸಿದೆ.