ಸ್ವಾಮಿ,
‘ರೆಡಿ’ ರಾಮಯ್ಯನವರೇ...
‘ಬರದ ಮಕ್ಕಳಿಗೆ ಶಿಕ್ಷಣ
ಶುಲ್ಕ ಇಲ್ಲ...!’
ಒಪ್ಪತಕ್ಕ ನಿಲುವೇ, ಸರಿ! ಆದರೂ...
ಇಂಥ ‘ಬಿಡಿಗಾಸಿನ ಸಾಂತ್ವನ’
ಯಾರಿಗೆ ಬೇಕು ಶಿವ?
ಮಳೆ ಬರಲಿ ಬರ ಬರಲಿ:
ಸತ್ತಂತೆ ಬದುಕಬಲ್ಲೆವು ನಾವು...
ನೀವು ನಿಜದ ಧಣಿಯಾಗಬೇಕು
ನಮ್ಮ ಪಾಲಿಗೆ.
ಅಂದರೆ, ಬಂದ ಅಷ್ಟಿಷ್ಟು ಬೆಳೆಗಾದರೂ
ಕಳೆದುಕೊಂಡಷ್ಟು ಬೆಲೆ ಕೊಡಿ;
ಕಣ್ಣೀರು ಕೋಡಿಯಾಗದಂತೆ
ನೋಡಿ; ನಿರಾಳ ಬದುಕ ಬಿಡಿ...!