ನಗರವನ್ನು ಸ್ವಚ್ಛಗೊಳಿಸುವುದಕ್ಕಾಗಿಯೇ ಬಿಬಿಎಂಪಿ ತನ್ನ ನೌಕರರನ್ನು ಮತ್ತು ಗುತ್ತಿಗೆದಾರರನ್ನು ನೇಮಿಸಿದೆ. ಅವರಿಗೆ ಸಲ್ಲುವ ಸೌಲಭ್ಯ ಮತ್ತು ವೇತನ ಕೊಟ್ಟರೂ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಶಿಕ್ಷಣ ಪಡೆಯಬೇಕಾದ ವಿದ್ಯಾರ್ಥಿಗಳನ್ನು ದುರುಪಯೋಗಪಡಿಸುವುದು ಉಚಿತವೇ? ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಸರಿಯಾಗಿ ನಿರ್ವಹಿಸದೆ, ಭ್ರಷ್ಟಾಚಾರಕ್ಕೆ ಸೊಪ್ಪು ಹಾಕುತ್ತಾ ಜನರ ಕಣ್ಣಿಗೆ ಮಣ್ಣು ಎರಚಲಾಗುತ್ತಿದೆ.
ಆಯುಕ್ತರನ್ನು, ಎಂಜಿನಿಯರ್ಗಳನ್ನು, ಸಾವಿರಾರು ನೌಕರರನ್ನು ಸಂಬಳ ಕೊಟ್ಟು ನೇಮಿಸಿರುವುದು ಏಕೆ? ಗುತ್ತಿಗೆದಾರರು ಇರುವುದು ಏಕೆ? ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಿ ಪ್ರತಿನಿಧಿಗಳನ್ನು ಆರಿಸುವ ಬದಲು ಬಿಬಿಎಂಪಿಯನ್ನು ಯಾವುದಾದರೂ ಖಾಸಗಿ ಸಂಸ್ಥೆಗೆ ಗುತ್ತಿಗೆಗೆ ಕೊಡುವುದು ಉಚಿತವಲ್ಲವೇ?
–ಕೆ.ಎನ್. ಭಗವಾನ್, ಬೆಂಗಳೂರು.