ನಾಗಮಂಗಲ: ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾತ್ಮ ಗಾಂಧೀಜಿಯವರ ಒಡನಾಟದಲ್ಲಿ ಗುರುತಿಸಿಕೊಂಡು ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಈಡಿಗ ಸಮುದಾಯದ ಸದಸ್ಯೆ ಲಲಿತಾಲಕ್ಷ್ಮಣ್ ನುಡಿದರು.
ಪಟ್ಟಣದ ಈಡಿಗ ಸಮುದಾಯದ ವತಿಯಿಂದ ತಾಲ್ಲೂಕಿನ ಮುದ್ದೇಗೌಡನ ಕೊಪ್ಪಲಿನ ಎಲ್ಲಮ್ಮ ದೇವಸ್ಥಾನದಲ್ಲಿ ಈಚೆಗೆ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 157 ನೇ ಜಯತ್ಯುಂತ್ಸವದಲ್ಲಿ ಅವರು ಮಾತನಾಡಿದರು. ಜಾತಿ, ಮತ ಭೇದವಿಲ್ಲದೇ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದವರು, ಪರಿಸರ ರಕ್ಷಣೆ ಜಾಗೃತಿ ಮೂಡಿಸಿದವರು. ಮಾನವನಿಗೆ ಮರುಜನ್ಮವೆಂಬುದಿಲ್ಲ ಎಂದು ಸಾರಿದ ಧೀಮಂತ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರು ಎಂದರು.
ಕೇರಳದ ಮೂಲದವರಾದ ಇವರು ದೇಶದಾದ್ಯಂತ ಸಂಚರಿಸಿ ಮನುಕುಲದ ಏಳಿಗೆಗೆ ಸಲ್ಲಿಸಿದ ಸೇವೆ ಸ್ಮರಿಸಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಅಂಚೆ ಚೀಟಿ ಹಾಗು 5 ರೂ ನಾಣ್ಯದಲ್ಲಿ ಇವರ ಭಾವಚಿತ್ರವನ್ನು ಮುದ್ರಿಸುವ ಮೂಲಕ ಗೌರವ ತೋರಿದ್ದರು. ಶಿವಮೊಗ್ಗ, ಕಾರವಾರ, ಮಂಗಳೂರು ಉಡುಪಿಯಲ್ಲಿ ಇವರ ಜಯಂತಿಯನ್ನು ವಿಜೃಂಭ ಣೆಯಿಂದ ಆಚರಿಸಲಾಗುತ್ತದೆ. ಇದೇ ಮೊದಲು ತಾಲ್ಲೂಕಿನಲ್ಲಿ ಗುರುಗಳ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ತಾ.ಪಂ ಸದಸ್ಯ ಎನ್.ಬಿ.ಕುಮಾರ್, ಪ.ಪಂ ಮಾಜಿ ಪ್ರಧಾನ ಚಂದ್ರು, ಮುಖಂಡರಾದ ರಮೇಶ್, ದಯಾ ನಂದ್, ಯಲ್ಲೇಗೌಡ, ಪಾಲಗ್ರಾರ ಮೂರ್ತಿ, ಈಡಿಗ ಸಮುದಾಯದವರು ಪಾಲ್ಗೊಂಡಿದ್ದರು.