ಯೇಸುವಿನ ಜೀವನ ಚರಿತ್ರೆಯನ್ನು ಕುರಿತು ಹಲವಾರು ಪುಸ್ತಕಗಳು ಬಂದಿರಬಹುದು. ಆದರೆ ಅವನ ಬದುಕನ್ನು ಕಾವ್ಯದಲ್ಲಿ, ಅದೂ ಆರು ಸಾಲಿನ ಷಟ್ಪದಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಇದೇ ಮೊದಲ ಬಾರಿಗೆ ನಡೆದಿದೆ.
ಪ್ರೊ. ವಿ. ನರಹರಿ ಅವರು ಈ ಅಪರೂಪದ ಕೆಲಸ ಮಾಡಿದ್ದಾರೆ. `ಯೇಸು ಜೀವನ ಚರಿತೆ~ ಎಂಬ ಈ ಗ್ರಂಥದಲ್ಲಿ 2010 ಪದ್ಯಗಳಿದ್ದು, ಕ್ರೈಸ್ಟ್ ಕಾಲೇಜಿನ ದಿವ್ಯವಾಣಿ ಕಮ್ಯೂನಿಕೇಷನ್ಸ್ ಇದನ್ನು ಪ್ರಕಟಿಸಿದೆ. ಫೆ. 4ರ ಶನಿವಾರ ಗ್ರಂಥ ಬಿಡುಗಡೆಯಾಗಲಿದೆ.
ಕೃತಿ ಪರಿಚಯ: ಸಾಹಿತಿ ಪ್ರೊ. ದೊಡ್ಡರಂಗೇಗೌಡ. ಅಧ್ಯಕ್ಷತೆ: ಕ್ರೈಸ್ಟ್ ವಿಶ್ವವಿದ್ಯಾಲಯದ ಕುಲಪತಿ ಫಾದರ್ ಥಾಮಸ್ ಐಕ್ಕರ. ಉಪಸ್ಥಿತಿ: ಗ್ರಂಥಕರ್ತೃ ಪ್ರೊ. ವಿ. ನರಹರಿ.
ಸ್ಥಳ: ಕ್ರೈಸ್ಟ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಸ್. ಜಿ. ಪಾಳ್ಯ. ಸಮಯ: ಬೆಳಿಗ್ಗೆ 10ಕ್ಕೆ.