ಆ ಪೈಕಿ ಹೆಚ್ಚಿನವರು (28 ಜನ) ಕೇಂದ್ರ ಅಬಕಾರಿ ಮತ್ತು ಸುಂಕ ಮಂಡಳಿ ಅಧಿಕಾರಿಗಳು. ರೈಲ್ವೆ ಸಚಿವಾಲಯದ 20 ಸಿಬ್ಬಂದಿ, ದೂಸಂಪರ್ಕ ಇಲಾಖೆ 18, ದೆಹಲಿ ಮಹಾನಗರ ಪಾಲಿಕೆ 15 ಸಿಬ್ಬಂದಿಯಿಂದ ದಂಡ ವಸೂಲು ಮಾಡುವಂತೆ ಸಿವಿಸಿ ಶಿಫಾರಸು ಮಾಡಿದೆ. ಭ್ರಷ್ಟಾಚಾರ ಆರೋಪ ಹೊತ್ತವರಲ್ಲಿ ಬ್ಯಾಂಕ್ ಅಧಿಕಾರಿಗಳೂ ಸೇರಿದ್ದಾರೆ. ಕೆನರಾ ಬ್ಯಾಂಕ್ನ 10, ಸಿಂಡಿಕೇಟ್ ಬ್ಯಾಂಕ್ನ 9, ಪಂಜಾಬ್ ನ್ಯಾಶನಲ್ ಬ್ಯಾಂಕ್ನ 7 ಮತ್ತು ದೇನಾ ಬ್ಯಾಂಕ್ನ ಐವರು ಅಧಿಕಾರಿಗಳು ಸೇರಿದ್ದಾರೆ.