ನವದೆಹಲಿ (ಪಿಟಿಐ): ‘ಭ್ರಷ್ಟಾಚಾರದ ಜೊತೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
‘ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಹರ್ಷವರ್ಧನ್ ಒತ್ತಾಯಿಸಿದ್ದಾರೆ. ಸಾಕ್ಷ್ಯ ಒದಗಿಸಿದರೆ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿರುವೆ’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಜ.10 ದಿಂದ ‘ಆಪ್’ ಸದಸ್ಯತ್ವ ಅಭಿಯಾನ: ಆಮ್ ಆದ್ಮಿ ಪಕ್ಷ ಜನವರಿ 10ರಿಂದ ಸದಸ್ಯತ್ವ ಅಭಿಯಾನ ಆರಂಭಿಸಲಿದೆ ಎಂದು ಪಕ್ಷದ ಮುಖಂಡ ಯೋಗೇಂದ್ರ ಯಾದವ ತಿಳಿಸಿದ್ದಾರೆ.
ಶಿವರಾಜ್ ನಿವಾಸದ ಎದುರು ಪ್ರತಿಭಟನೆ: ಭೋಪಾಲದಲ್ಲಿ ಎರಡು ಬಂಗ್ಲೆಗಳನ್ನು ಹೊಂದಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮನೆ ಮುಂದಿನ ರಸ್ತೆಯಲ್ಲಿ ‘ಪೊರಕೆ’ಯಿಂದ ಕಸಗುಡಿಸಿ ‘ಆಮ್ ಆದ್ಮಿ’ ಪಕ್ಷದ (ಆಪ್) ಕಾರ್ಯಕರ್ತರು ಶನಿವಾರ ವಿನೂತನವಾಗಿ ಪ್ರತಿಭಟಿಸಿದರು.