ಕುಡಿಯುವ ನೀರಿನ ಕೊರತೆ ಉಂಟಾಗಬಾರದು ಎಂದು ನದಿ ದಂಡೆಯಲ್ಲಿರುವ ಜಾಕವೆಲ್ಗೆ ನೀರು ಹರಿಸಿಲ್ಲ ಈ ಭಾಗದ ಜನರ, ರೈತರ ಸಮಸ್ಯೆಯನ್ನು ಅವಲೋಕನ ಮಾಡದೇ ಜಿಲ್ಲಾಡಳಿತ ಬೇರೆ ತಾಲ್ಲೂಕುಗಳ ನೀರಾವರಿ ಕಾಲು ವೆಗಳಿಗೆ ನೀರು ಹರಿಯಲು ಬಿಟ್ಟಿರು ವುದು ಸಮಂಜಸವಲ್ಲ ಎಂದರು.
ಸಮೀಪದ ಅಮಟೂರ, ಬೇವಿನ ಕೊಪ್ಪ, ಅಸುಂಡಿ, ಕರೀಕಟ್ಟಿ, ದೊಡ ವಾಡ, ಉಡಿಕೇರಿ ಹಾಗೂ ನೂರಾರು ಗ್ರಾಮಗಳ ಜನರಿಗೆ, ಹುಬ್ಬಳ್ಳಿ ಧಾರ ವಾಡ ಅವಳಿ ನಗರಗಳಿಗೆ ಮಲಪ್ರಭಾ ನದಿ ಜೀವಾಳವಾಗಿದೆ.
ಈ ಭಾಗದ ಶಾಸಕ ಜಗದೀಶ ಮೆಟ ಗುಡ್ಡ ಹಾಗೂ ಇತರ ಪ್ರತಿನಿಧಿಗಳು ಸಮಸ್ಯೆ ಗಂಭೀರ ಸ್ವರೂಪ ಪಡೆಯುವ ಮುನ್ನ ಗಮನ ಹರಿಸಬೇಕು ಎಂದು ಎಚ್ಚರಿಸಿದ್ದಾರೆ. ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳದ ನಿರ್ದೇಶಕ ಚನ್ನಪ್ಪ ಬೂದಿಹಾಳ, ಪುರಸಭೆ ಸದಸ್ಯ ಮಹೇಶ ಹರಕುಣಿ, ಎಫ್.ಎಸ್.ಸಿದ್ಧನಗೌಡರ, ಜಗದೀಶ ಜಕ್ಕಪ್ಪನವರ ಉಪಸ್ಥಿತರಿದ್ದರು.