ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಕೊಲೆ ಆರೋಪಿಗಳ ಬಂಧನ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಲ್‌ಸೆಂಟರ್‌ನ ಕಾರು ಚಾಲಕ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನ ನಿವಾಸಿ ಆನಂದ್ ಕೊಲೆ ಪ್ರಕರಣದ ಮೂರು ಮಂದಿ ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರದ ಕುರುಬರಹಳ್ಳಿಯ ಪ್ರದೀಪ್ (24), ಎಳ್ಳುಪುರ ಗ್ರಾಮದ ವೆಂಕಟೇಶ (19) ಮತ್ತು ತುಮಕೂರು ಸಮೀಪದ ನರಸಯ್ಯನಪಾಳ್ಯದ ಜಯರಾಮ (23) ಬಂಧಿತರು.

ದ್ವೇಷದ ಹಿನ್ನೆಲೆಯಲ್ಲಿ ಆನಂದ್‌ನನ್ನು ಅಪಹರಿಸಿದ್ದ ಆರೋಪಿಗಳು ಕೊಲೆ ಮಾಡಿ ಶವವನ್ನು ತುಮಕೂರು ಸಮೀಪದ ಸಾತಘಟ್ಟದ ಬಳಿಯ ನೀರಿನ ಹೊಂಡಕ್ಕೆ ಎಸೆದು ಪರಾರಿಯಾಗಿದ್ದರು. ಆನಂದ್ ಕಾಣೆಯಾಗಿದ್ದ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

`ಜಯರಾಮ ಮತ್ತು ಆನಂದ್ ಕಾಲ್‌ಸೆಂಟರ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕ್ಷುಲ್ಲಕ ವಿಷಯಕ್ಕೆ ಅವರ ಮಧ್ಯೆ ಜಗಳವಾಗಿತ್ತು. ಆನಂದ್ ತನ್ನ ಸ್ನೇಹಿತರ ಜತೆ ಸೇರಿ ಜಯರಾಮನ ಮೇಲೆ ಹಲ್ಲೆ ನಡೆಸಿದ್ದ. ಇದಕ್ಕೆ ಪ್ರತೀಕಾರವಾಗಿ ಆತ ಕೊಲೆ ಮಾಡಿದ್ದ. ವೆಂಟೇಶ ಮತ್ತು ಪ್ರದೀಪ್ ಜಯರಾಮನ ಚಿಕ್ಕಮ್ಮನ ಮಕ್ಕಳು~ ಎಂದು ಇನ್‌ಸ್ಪೆಕ್ಟರ್ ಗೋವಿಂದರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT