ತಾಲ್ಲೂಕಿನ ಅಮರಾವತಿ ಕ್ರಾಸ್, ಗೋರಬಾಳ ಕ್ರಾಸ್ ಹಾಗೂ ಬಸ ವೇಶ್ವರ ವೃತ್ತದ ಹತ್ತಿರ ಜನರು ಸುರ ಕ್ಷಿತವಾಗಿ ರಸ್ತೆ ದಾಟಲು ಪರ್ಯಾಯ ಮಾರ್ಗ ಮಾಡಿಕೊಡಲು ಒತ್ತಾಯಿಸಲಾಗಿದೆ, ಮತ್ತೆ ಸದ್ಯದಲ್ಲೇ ನವದೆಹಲಿಗೆ ತೆರಳಿ ಸಂಸದರು, ಸಚಿವರ ಮೂಲಕ ಒತ್ತಡ ಹಾಕುವುದಾಗಿ ಅವರು ಹೇಳಿದರು.
ರಸ್ತೆ ಕಾಮಗಾರಿಯ ಗುತ್ತಿಗೆ ದಾರರಿಗೆ ಹಾಗೂ ಅಧಿಕಾರಿಗಳಿಗೆ ಕರೆ ಮಾಡಿ, ಕೂಡಲೇ ಈ ಮೂರು ಕಡೆ ಕೆಲಸ ಸ್ಥಗಿತಗೊಳಿಸುವಂತೆ ತಾಕೀತು ಮಾಡಿದರು.
ನೇಕಾರ ಕಾಲೊನಿಯ ನಿವಾಸಿಗಳು ಮಾತನಾಡಿ ಸುತ್ತಲಿನ ಬಡಾವಣಿಗಳ ಜನರು ಪ್ರತಿನಿತ್ಯ ರಸ್ತೆ ದಾಟಲು ಪರ ದಾಡುತ್ತಿದ್ದಾರೆ ಎಂದು ಹೇಳಿದರು. ಬೇಡಿಕೆ ಈಡೇರದಿದ್ದಲ್ಲಿ ಇಡೀ ದಿನ ಹೆದ್ದಾರಿ ತಡೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಬಿ.ಎಸ್.ಪಾಟೀಲ ಸರ್ಜಾಪೂರ, ಶಿವಾನಂದ ರೂಳಿ, ಪ್ರೊ.ಬಿ.ಎಂ. ಹೊಸಮನಿ, ಎಸ್.ಬಿ.ಗೌಡರ, ರಾಜು ಇಲಾಳ, ರವಿ ಸಿಂದಗಿ, ಕುಮಾರ ಗಂಗಾ ಧರಮಠ, ರಾಘು ರಾಜಾಪೂರ, ಬಸನ ಗೌಡ ಗೌಡರ, ಸೋಮಶೇಖರ ಕಾಟಾ ಪುರಮಠ ಮತ್ತಿತರರು ಪಾಲ್ಗೊಂಡಿ ದ್ದರು.