ಜಮ್ಮು (ಪಿಟಿಐ): ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ಕಲಂ ಅಗತ್ಯತೆ ಕುರಿತು ಸಂಸತ್ತಿ ನಲ್ಲಿ ಚರ್ಚೆ ನಡೆಯಬೇಕು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. ಈ ಕಲಂನ ಕುರಿತು ಆಡಳಿತ ಪಕ್ಷ ‘ಸ್ಪಷ್ಟತೆ’ ಹೊಂದಿದೆ. ಈ ಕುರಿತು ಮೊದಲು ಸಂಘ ಪರಿವಾರದೊಂದಿಗೆ ಚರ್ಚೆ ನಡೆಸಿ ಎಂದು ಮೋದಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಮೋದಿ ಹೇಳಿಕೆಯನ್ನು ಗಂಭೀರ ವಾಗಿ ಪರಿಗಣಿಸಬೇಕಿಲ್ಲ. ಮೋದಿಗೆ ‘ಇತಿಹಾಸದ ಬಗ್ಗೆ ಅರಿವಿಲ್ಲ’ ಮತ್ತು ಅನೇಕ ವಿಷಯಗಳ ಬಗ್ಗೆ ‘ಸುಳ್ಳು ಮಾತನಾಡುತ್ತಿದ್ದಾರೆ’ ಎಂದು ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.