ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರಿಗಳಿಗೆ ಮೊಬೈಲ್

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ವಾರ್ಷಿಕವಾಗಿ ನಡೆಯುವ ಅಮರನಾಥ ಯಾತ್ರೆಯಲ್ಲಿ ಈ ವರ್ಷ ಭಾಗವಹಿಸುವವರಿಗೆ ಸರ್ಕಾರ ಮೊಬೈಲ್ ಸಂಪರ್ಕ ಒದಗಿಸಲಿದೆ.

ಏಳು ದಿನಗಳ ವಾಯಿದೆ  ಹೊಂದಿರುವ `ಯಾತ್ರಾ ಕಾರ್ಡ್~ ಹೆಸರಿನ ಪ್ರಿಪೇಡ್ ಸಿಮ್‌ನ್ನು ಈ ವರ್ಷ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಪಡೆಯಬಹುದು.

ಇಂತಹ ಸೌಲಭ್ಯ ಯಾತ್ರಿಕರಿಗೆ ಕಲ್ಪಿಸಲು ಕೇಂದ್ರ ಗೃಹ ಸಚಿವಾಲಯ ತಾತ್ವಿಕ ಒಪ್ಪಿಗೆ ನೀಡಿದೆ. ಮೊಬೈಲ್ ಫೋನ್‌ಗಳು ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ ಅಮರನಾಥ ಯಾತ್ರಿಗಳಿಗೆ ಈ ಸೌಲಭ್ಯ ಒದಗಿಸುತ್ತಿರುವುದು ಇದೇ ಮೊದಲ ಬಾರಿ.
 
ಮೊಬೈಲ್ ಸಂಪರ್ಕ ಇಲ್ಲದೇ ಯಾತ್ರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT