ಪಡುಬಿದ್ರಿ: ಯುಪಿಸಿಎಲ್ನಲ್ಲಿ ಉತ್ಪಾದನೆಯಾಗುವ ವಿದ್ಯುತ್ಗೆ ಕೇಂದ್ರೀಯ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ಹೆಚ್ಚುವರಿ ದರ ನಿಗರಿಪಡಿಸಿರುವುದನ್ನು ನವದೆಹಲಿಯ ವಿದ್ಯುತ್ ತಗಾದೆಗಳ ಕುರಿತಾದ ಅಪಲೆಟ್ ಟ್ರುಬುನೆಲ್ ರದ್ದುಗೊಳಿಸಿದೆ. ಈ ಹಿನ್ನಲೆಯಲ್ಲಿ ಯುಪಿಸಿಎಲ್ಗೆ ಈ ಮೂಲಕ ಭಾರೀ ಹಿನ್ನಡೆಯಾಗಿದೆ.
ವಿದ್ಯುತ್ ಖರೀದಿ ಒಪ್ಪಂದದಲ್ಲಿ ಕಂಪೆನಿಯಿಂದ ಉತ್ಪಾದನೆಯಾಗುವ ವಿದ್ಯುತ್ಗೆ ರೂ.
2.24ನಿಗದಿಪಡಿಸಲಾಗಿತ್ತು. ಆದರೆ ಈ ವೇಳೆ ಕಂಪನಿಯು ಎಸ್ಕಾಂನಲ್ಲಿ ಯಾವುದೇ ಒಪ್ಪಂದ ಮಾಡದೆ ಕೇಂದ್ರಿಯ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದು ಸುಮಾರು ರೂ. 5 ನಿಗದಿ ಪಡಿಸಲಾಗಿತ್ತು.
ಇದರಿಂದ ಎಸ್ಕಾಂಗೆ 625 ಕೋಟಿ ರೂ. ಹೆಚ್ಚುವರಿ ಹೊರೆಯಾಗಿತ್ತು.
ಇದನ್ನು ಪ್ರತಿಭಟಿಸಿ ಎಸ್ಕಾಂ ನವದೆಹಲಿಯ ವಿದ್ಯುತ್ ತಗಾದೆಗಳ ಕುರಿತಾದ ಅಪಲೆಟ್ ಟ್ರುಬುನೆಲ್ಗೆ ದೂರು ನೀಡಿತ್ತು. ಇದರಲ್ಲಿ ಯುಪಿಸಿಎಲ್ ವಿರುದ್ಧ ಹೋರಾಟ ನಡೆಸುತ್ತಿರುವ ನಂದಿಕೂರು ಜನಜಾಗೃತಿ ಸಮಿತಿಯನ್ನು ಪ್ರತಿವಾದಿಯನ್ನಾಗಿಸಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಸೆಪ್ಟಂಬರ್ 4ರಂದು ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ ಅಪಲೆಟ್ ಟ್ರುಬುನೆಲ್ ಸೋಮವಾರ ಈ ಬಗ್ಗೆ ತೀರ್ಪು ಪ್ರಕಟಿಸಿ ಎಸ್ಕಾಂನೊಂದಿಗೆ ಮಾತುಕತೆ ನಡೆಸದೆ ದರ ಏರಿಕೆ ಮಾಡಿರುವ ಆದೇಶವನ್ನು ರದ್ದುಳಿಸಿತು.
ಸ್ವಾಗತಾರ್ಹ: ಅಪಲೆಟ್ ಟ್ರುಬುನೆಲ್ ಆದೇಶವನ್ನು ನಂದಿಕೂರು ಜನಜಾಗೃತಿ ಸಮಿತಿ ಸ್ವಾಗತಿಸಿದೆ. ಯುಪಿಸಿಎಲ್ ಯೋಜನೆಯ ಇನ್ನೂ ಹಲವಾರು ಅಕ್ರಮಗಳನ್ನು ಬಯಲಿಗೆಳೆಯುವುದಾಗಿ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಜಯಂತ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.