ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಸಿಎಲ್: ದರ ಏರಿಕೆ ರದ್ದುಪಡಿಸಿ ಆದೇಶ

Last Updated 9 ಅಕ್ಟೋಬರ್ 2012, 8:45 IST
ಅಕ್ಷರ ಗಾತ್ರ

ಪಡುಬಿದ್ರಿ: ಯುಪಿಸಿಎಲ್‌ನಲ್ಲಿ ಉತ್ಪಾದನೆಯಾಗುವ ವಿದ್ಯುತ್‌ಗೆ ಕೇಂದ್ರೀಯ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ಹೆಚ್ಚುವರಿ ದರ ನಿಗರಿಪಡಿಸಿರುವುದನ್ನು ನವದೆಹಲಿಯ ವಿದ್ಯುತ್ ತಗಾದೆಗಳ ಕುರಿತಾದ ಅಪಲೆಟ್ ಟ್ರುಬುನೆಲ್ ರದ್ದುಗೊಳಿಸಿದೆ. ಈ ಹಿನ್ನಲೆಯಲ್ಲಿ ಯುಪಿಸಿಎಲ್‌ಗೆ ಈ ಮೂಲಕ ಭಾರೀ ಹಿನ್ನಡೆಯಾಗಿದೆ.

ವಿದ್ಯುತ್ ಖರೀದಿ ಒಪ್ಪಂದದಲ್ಲಿ ಕಂಪೆನಿಯಿಂದ ಉತ್ಪಾದನೆಯಾಗುವ ವಿದ್ಯುತ್‌ಗೆ ರೂ.
2.24ನಿಗದಿಪಡಿಸಲಾಗಿತ್ತು. ಆದರೆ ಈ ವೇಳೆ ಕಂಪನಿಯು ಎಸ್ಕಾಂನಲ್ಲಿ ಯಾವುದೇ ಒಪ್ಪಂದ ಮಾಡದೆ ಕೇಂದ್ರಿಯ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದು ಸುಮಾರು ರೂ. 5 ನಿಗದಿ ಪಡಿಸಲಾಗಿತ್ತು.
ಇದರಿಂದ ಎಸ್ಕಾಂಗೆ 625 ಕೋಟಿ ರೂ. ಹೆಚ್ಚುವರಿ ಹೊರೆಯಾಗಿತ್ತು.

ಇದನ್ನು ಪ್ರತಿಭಟಿಸಿ ಎಸ್ಕಾಂ ನವದೆಹಲಿಯ ವಿದ್ಯುತ್ ತಗಾದೆಗಳ ಕುರಿತಾದ ಅಪಲೆಟ್ ಟ್ರುಬುನೆಲ್‌ಗೆ ದೂರು ನೀಡಿತ್ತು. ಇದರಲ್ಲಿ ಯುಪಿಸಿಎಲ್ ವಿರುದ್ಧ ಹೋರಾಟ ನಡೆಸುತ್ತಿರುವ ನಂದಿಕೂರು ಜನಜಾಗೃತಿ ಸಮಿತಿಯನ್ನು ಪ್ರತಿವಾದಿಯನ್ನಾಗಿಸಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಸೆಪ್ಟಂಬರ್ 4ರಂದು ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ ಅಪಲೆಟ್ ಟ್ರುಬುನೆಲ್ ಸೋಮವಾರ ಈ ಬಗ್ಗೆ ತೀರ್ಪು ಪ್ರಕಟಿಸಿ ಎಸ್ಕಾಂನೊಂದಿಗೆ ಮಾತುಕತೆ ನಡೆಸದೆ ದರ ಏರಿಕೆ ಮಾಡಿರುವ ಆದೇಶವನ್ನು ರದ್ದುಳಿಸಿತು.

ಸ್ವಾಗತಾರ್ಹ: ಅಪಲೆಟ್ ಟ್ರುಬುನೆಲ್ ಆದೇಶವನ್ನು ನಂದಿಕೂರು ಜನಜಾಗೃತಿ ಸಮಿತಿ ಸ್ವಾಗತಿಸಿದೆ. ಯುಪಿಸಿಎಲ್ ಯೋಜನೆಯ ಇನ್ನೂ ಹಲವಾರು ಅಕ್ರಮಗಳನ್ನು ಬಯಲಿಗೆಳೆಯುವುದಾಗಿ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಜಯಂತ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT