ಭಾನುವಾರ (ಡಿ.16) ವಿಜಯ ದಿವಸ. ನಗರದ ಕೆಲವೆಡೆ ಸೈನಿಕರು, ಅವರ ಕುಟುಂಬದವರು ಯೋಧರ ಸಾಧನೆ ಸ್ಮರಿಸಲು ಈ ದಿನ ಇನ್ನೊಂದು ಸಂದರ್ಭವಾಯಿತು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ `ಸ್ಮರಣಾಂಜಲಿ' ಕಾರ್ಯಕ್ರಮದಲ್ಲಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡವರು ಎಣಿಕೆಗೆ ಸಿಗದಷ್ಟಿದ್ದರು. ಒಂದು ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಕರ್ಷಣೆ. ಇನ್ನೊಂದು ಕಡೆ ಅಗಲಿದ ಯೋಧರ ಸ್ಮರಣೆ. ಎಲ್ಲವುಗಳ ನಡುವೆ ಹರಿದದ್ದು ಭಾವನದಿ.