ಲಖನೌ (ಐಎಎನ್ಎಸ್): ಉತ್ತರ ಪ್ರದೇಶದ ಬಲಿಪುರ ಎಂಬಲ್ಲಿ ಮಾರ್ಚ್ 2ರಂದು ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಘುರಾಜ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರಿಗೆ ನೋಟಿಸ್ ಜಾರಿ ಮಾಡಿರುವ ಸಿಬಿಐ ವಾರದೊಳಗೆ ತನ್ನ ಮುಂದೆ ಹಾಜರಾಗಲು ಸೂಚಿಸಿದೆ.
ಈ ಸಂಬಂಧ ಸಿಬಿಐ ಪ್ರಾಥಮಿಕ ತನಿಖೆ ಕೈಗೊಂಡಿದ್ದು, ಪ್ರಕರಣದಲ್ಲಿ ಭಯ್ಯಾ ಅವರ ಪಾತ್ರದ ಬಗ್ಗೆ ಹೇಳಿಕೊಳ್ಳುವ ಸಾಕ್ಷ್ಯಾಧಾರಗಳೇನೂ ಸಿಕ್ಕಿಲ್ಲ ಎನ್ನಲಾಗಿದೆ.
ಬಲಿಪುರ ಗ್ರಾಮದ ಮುಖಂಡ ನನ್ನೇ ಯಾದವ್, ಅವರ ಸಹೋದರ ಸುರೇಶ್ ಹಾಗೂ ಡಿಎಸ್ಪಿ ಜಿಯಾ ಉಲ್ ಹಕ್ ಈ ಪ್ರಕರಣದಲ್ಲಿ ಕೊಲೆಯಾಗಿದ್ದರು.