ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಲಹೆ ನೀಡಲು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಅದು ಇದೇ 25ರಂದು ಸಭೆ ಸೇರುವ ಸಾಧ್ಯತೆ ಇದೆ. ನ.1ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಗಳ ಸಂಖ್ಯೆ 50 ದಾಟದಂತೆ ನಿಗಾ ವಹಿಸಲು ಹಾಗೂ ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆ ಮತ್ತು ಕ್ಷೇತ್ರವಾರು ಪ್ರಾತಿನಿಧ್ಯದ ಕಡೆ ಗಮನ ನೀಡಲು ಸರ್ಕಾರ ಸೂಚಿಸಿದೆ.