ನೆಲಮಂಗಲ: ರಾಷ್ಟ್ರ ನಾಯಕರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ಜನಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಉದ್ಯಮಿ ಭವಾನಿ ಶಂಕರ್ ಬೈರೇಗೌಡ ಹೇಳಿದರು.
ಇಲ್ಲಿನ ಎಸ್ಎಲ್ಆರ್ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದಲ್ಲಿ ಸ್ಥಳೀಯ ಸಮಾಜ ಸೇವಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸೂಲಿಬೆಲೆ ಚಕ್ರವರ್ತಿ `ಜಾಗೋ ಭಾರತ್~ ಉಪನ್ಯಾಸ ನೀಡಿದರು.
ಶಾಸಕ ಎಂ.ವಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಎಂ.ನಾರಾಯಣ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಸುಬ್ಬರಾಮಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಕರಿವರದಯ್ಯ, ದೇಗನಹಳ್ಳಿ ಸುರೇಶ್, ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ನಾಗರಾಜು, ಪಟ್ಟಣ ಶಕ್ತಿ ಕೇಂದ್ರದ ಅಧ್ಯಕ್ಷ ಕೇಬಲ್ ಸುರೇಶ್, ಬೇಗೂರು ಘಟಕದ ಅಧ್ಯಕ್ಷ ಬಿ.ನಾಗೇಶ್ ವೇದಿಕೆಯಲ್ಲಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ. ಲಕ್ಷ್ಮಿನಾರಾಯಣ ಶ್ರೇಷ್ಠಿ, ಸುರೇಶ್ ಆಳ್ವ, ಮುಖ್ಯ ಶಿಕ್ಷಕಿ ಅನಸೂಯ ಅವರನ್ನು ಸನ್ಮಾನಿಸಲಾಯಿತು.