ಕಡು ಬಡತನದ ಕಾರಣ
ಮಂಗಳೂರಿನಲ್ಲಿ ಆಯಿತಂತೆ
ಆಗ ತಾನೇ ಜನಿಸಿದ
ಶಿಶುವಿನ ವಿಕ್ರಯ
ಈ ನೆಲದಲ್ಲಿ ಬಡವರ
ಬದುಕು ಆಗಬಾರದಿತ್ತು
ಇಷ್ಟೊಂದು ಹೀನಾಯ
ಹಾಳೆಗಳ ಮೇಲಷ್ಟೆ
ರಾರಾಜಿಸುತ್ತವೆ ದೀನ
ದಲಿತರ ಉದ್ಧಾರಕ್ಕಾಗಿ
ಸರ್ಕಾರದ ನೂರೆಂಟು ಯೋಜನೆ
ಇದಕ್ಕಾಗಿ ಸರ್ಕಾರ
ಮೀಸಲಿಟ್ಟ ಹಣದಲ್ಲಿ
ಬಹುಪಾಲು ಸೇರುತ್ತದೆ
ನುಂಗಣ್ಣರ ಖಜಾನೆ