ಬೆಂಗಳೂರು: ವಿದ್ಯುತ್ ದರ ಏರಿಕೆ ಸಂಬಂಧ ಪ್ರಸ್ತಾವ ಸಲ್ಲಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ), ಡಿಸೆಂಬರ್ 10ರ ವರೆಗೆ ಎಸ್ಕಾಂಗಳಿಗೆ ಕಾಲಾವಕಾಶ ನೀಡಿದೆ. ಪೂರ್ವ ನಿಗದಿಯಂತೆ ನ.30ರೊಳಗೆ ದರ ಏರಿಕೆ ಸಂಬಂಧ ಕಂಪೆನಿಗಳು ಪ್ರಸ್ತಾವ ಸಲ್ಲಿಸಬೇಕಾಗಿತ್ತು.
ಆದರೆ, ದರ ಏರಿಕೆ ಪ್ರಸ್ತಾವವನ್ನು ಅಂತಿಮಗೊಳಿಸಲು ಇನ್ನೂ ಸಾಧ್ಯವಾಗದ ಕಾರಣ ಕಂಪೆನಿಗಳು ಕಾಲಾವಕಾಶ ಕೇಳಿ ಶುಕ್ರವಾರ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದವು. ಇದನ್ನು ಮಾನ್ಯ ಮಾಡಿದ ಆಯೋಗ ಇದೇ 10ರ ಒಳಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದೆ.