ಕನಕಗಿರಿ: ಇಲ್ಲಿನ ವಿವಿಧ ಶಾಲೆಗಳಲ್ಲಿ ಶುಕ್ರವಾರ ದೇಶದ ಪ್ರಥಮ ಶಿಕ್ಷಣ ಮಂತ್ರಿ ಹಾಗೂ ಖ್ಯಾತ ವಿದ್ವಾಂಸ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆ ನಿಮಿತ್ತ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಆಚರಿಸಲಾಯಿತು.
ಕನ್ಯಾ ಶಾಲೆ: ಇ್ಲ್ಲಲಿನ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ದಶರಥರೆಡ್ಡಿ, ಮುಖ್ಯಗುರು ಶ್ರೀಶೈಲ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ದೊಡ್ಡಪ್ಪ ಕವಿತಾಳ ಮಾತನಾಡಿದರು.
ಗ್ರಾಪಂ ಸದಸ್ಯ ನಾಗರಾಜ ಬೋಂ ದಾಡೆ, ಎಸ್ಡಿಎಂಸಿ ಸದಸ್ಯರಾದ ಶ್ರೀನಿವಾಸ್ ಆರೇರ್, ಆನಂದ ಕಂದಗಲ್, ಚಂದುಸಾಬ, ಇತರರು ಮಾತನಾಡಿದರು. ಶಿಕ್ಷಕ ತಿಪ್ಪವ್ವ ನಿರೂಪಿಸಿದರು.
ದ್ಯಾಮವ್ವನಗುಡಿ : ದ್ಯಾಮವ್ವನಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಜಾದ್ ಅವರ ಭಾವಚಿತ್ರಕ್ಕೆ ಎಸ್ಡಿಎಂಸಿ ಅಧ್ಯಕ್ಷ ಶಾಮೀದಸಾಬ ಮಾಲಾರ್ಪಣೆ ಮಾಡಿದರು.
ಮುಖ್ಯಗುರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಯಮನೂರಪ್ಪ ಬೋಂದಾಡೆ, ಎಸ್ಡಿಎಂಸಿ ಸದಸ್ಯರಾದ ಮಹ್ಮದರಫಿ ಅಗರಬತ್ತಿ, ಸೈನಾಜ್ಬೇಗಂ ಶಿಕ್ಷಕರಾದ ವಿಮಲಾಬಾಯಿ ಜೋಶಿ, ಅಕ್ಕಮಹಾದೇವಿ, ಹೇಮಾ ಹಾಜರಿದ್ದರು.
ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿ ರೇಷ್ಮಾ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಅಜೀಜಸಾಬ ಕಾತರಕಿ, ಮಾಜಿ ಅಧ್ಯಕ್ಷ ಇಕ್ಬಾಲ್ ಖಾನ್, ಸದಸ್ಯರಾದ ರಫಿ ಹೂಗಾರ, ಮೆಹಬೂಬ ಕಲೆಗಾರ ಹಾಜರಿದ್ದರು.
ಚಿಕ್ಕಮಾದಿನಾಳ: ಸಮೀಪದ ಚಿಕ್ಕ ಮಾದಿನಾಳ ಗ್ರಾಮದಲ್ಲಿ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಉಪಾಧ್ಯಕ್ಷ ಚಿನ್ನಪ್ಪ ಬೋವಿ ವಹಿಸಿದ್ದರು.