ತುಮಕೂರು: ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಪ್ರಯುಕ್ತ ಬುಧವಾರ ‘ಭಾರತಕ್ಕಾಗಿ ಓಟ’ ನಡೆಯಿತು.
ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಸಮಿತಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಓಟವು ಬೆಳಿಗ್ಗೆ ತುಮಕೂರು ವಿಶ್ವವಿದ್ಯಾಲಯ ಎದುರು ಆರಂಭವಾಯಿತು.
ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಉತ್ಸವ ಸಮಿತಿ ಸದಸ್ಯರಾದ ಬೈರಪ್ಪ ಮಾತನಾಡಿ, ವಿವೇಕಾನಂದರ ಚಿಂತನೆಗಳು ಬರಹಗಳು ಇಂದಿಗೂ ಪ್ರಸ್ತುತ ಎಂದರು.
ಬಿಎಚ್ ರಸ್ತೆ ಮೂಲಕ ಸಾಗಿ ಟೌನ್ ಹಾಲ್ ವೃತ್ತದ ಬಳಿ ಓಟ ಕೊನೆಗೊಂಡಿತು. ಶಾಸಕ ಸುರೇಶ್ಗೌಡ, ಮುಖಂಡರಾದ ಶ್ರೀನಿವಾಸ್, ಪ್ರದೀಪ್, ಜ್ಯೋತಿಗಣೇಶ್, ಎಬಿವಿಪಿ ಸಂಘಟನೆಯ ಸುಬ್ರಮಣಿ, ಶ್ರೀನಿವಾಸ, ರವಿಕುಮಾರ್, ಅಮರೇಶ, ಭಗತ್ ಕ್ರಾಂತಿ ಸೇನೆ ಆರಾಧ್ಯ, ಕಿರಣ್, ವರ್ಷಾಚರಣೆ ಸಮಿತಿಯ ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.