`ಹಾವು ಕಡಿತದಿಂದ (ವರ್ಷಕ್ಕೆ) 50 ಸಾವಿರ ಮಂದಿ ಸಾವು' (ಪ್ರ. ವಾ. ಡಿ. 12)
ಈ ಕಾಲದಲ್ಲೂ ಹಾವುಗಳಿಂದ ಇಷ್ಟೊಂದು ಸಾವುಗಳೆ? ಅದಂತಿರಲಿ. ಲೆಕ್ಕವಿಲ್ಲದಷ್ಟು ಮಾನವ ಸರ್ಪಗಳ ವಿಷಕ್ಕೆ ಅಸಂಖ್ಯ ಮಂದಿ ಯಾವಾಗಲೂ ಬಲಿಯಾಗುತ್ತಾರೆ! ಹಾವುಗಳು ಅಪಾಯ ಸಂದರ್ಭದಲ್ಲಿ ಮಾತ್ರ ಕಚ್ಚುತ್ತವೆ; ಆದರೆ ಸುಮ್ಮ ಸುಮ್ಮನೇ ಕಚ್ಚುವುದು ಹಲವರ ಸ್ವಭಾವ. ಅಲ್ಲದೆ, ಎಷ್ಟೋ ಮಾನವ ಸರ್ಪಗಳಿಗೆ ಒಂದು ವೇಳೆ ವಿಷವಿಲ್ಲದಿದ್ದರೂ, ಎರಡು ನಾಲಗೆ ಇದ್ದೇ ಇರುತ್ತವೆ!
ದೇವರ ದಾಸಿಮಯ್ಯನ ಈ ಉಕ್ತಿಯೂ ಸ್ಮರಣೀಯ: `ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದರೆ, ವಿಷವೇರಿತ್ತಯ್ಯ ಅಪಾದ ಮಸ್ತಕಕ್ಕೆ ....' ಈಗ ದೇಶದ ಬಹುಭಾಗ ಹಸಿವಿನ ಹೆಬ್ಬಾವಿಗೆ ಗ್ರಾಸವಾಗಿದೆ! (ವಿಷಕಂಠನೆ ಕಾಪಾಡಬೇಕು).