ವಸ್ತ್ರವಿನ್ಯಾಸಕಿ ರೇಣುಕಾ ರಮೇಶ್ ಬಸವನಗುಡಿಯ ಬಸವ ಅಂಬರದಲ್ಲಿ ಈ ವರ್ಷದ ಪ್ರದರ್ಶನ, ಮಾರಾಟ ಮೇಳವನ್ನು ಹಮ್ಮಿಕೊಂಡಿದ್ದಾರೆ. ಶಿಫಾನ್, ಜಾರ್ಜೆಟ್, ಕ್ರೇಪ್, ಟಸ್ಸಾರ್ ಫ್ಯಾಬ್ರಿಕ್ನಲ್ಲಿ ಸಾಂಪ್ರದಾಯಿಕ ಚಿತ್ತಾರಗಳನ್ನು ಪಡಿಮೂಡಿಸುವ ಮೂಲಕ ಸೀರೆಗೆ ಶ್ರೀಮಂತ ಸ್ಪರ್ಶ ಕೊಡುವುದು ರೇಣುಕಾ ವೈಶಿಷ್ಟ್ಯ.
`ವೈನಾರಿ' ಹೆಸರಿನ ಈ ಬಾರಿಯ ಸಂಗ್ರಹದಲ್ಲಿ ನೈಸರ್ಗಿಕ ಬಣ್ಣಗಳನ್ನಷ್ಟೇ ಬಳಸಿದ್ದಾರೆ. ಬೆಲೆ ರೂ 5000ದಿಂದ ಆರಂಭ. ಜು.18ರಿಂದ 21ರವರೆಗೆ ನಾಲ್ಕು ದಿನ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ ಕೊಳ್ಳುವ ಅವಕಾಶ (ಸಂಪರ್ಕಕ್ಕೆ: 2656 1940/6544 1856).