ಗೋವಾದಲ್ಲಿ ಎಲ್.ಕೆ ಅಡ್ವಾಣಿ ಅವರ ರಥ ಯಾತ್ರೆಯು ಹಾದುಹೋಗಲಿರುವ ಹಿನ್ನೆಲೆಯಲ್ಲಿ ಸಿದ್ಧತೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಪಣಜಿಯಲ್ಲಿರುವ ಬಿಜೆಪಿ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು, `ಈ ಹಗರಣದಿಂದ ಲಾಭ ಪಡೆದಿರುವವರನ್ನು ಗುರಿಯಾಗಿಸುವುದನ್ನು ಬಿಟ್ಟು, ಕೇಂದ್ರ ಸರ್ಕಾರವು ಆಡಳಿತ ಯಂತ್ರವನ್ನು ಬಳಸಿಕೊಂಡು ಹಗರಣವನ್ನು ಬಯಲು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ~ ಎಂದು ಕಿಡಿ ಕಾರಿದರು.
`ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಯುಪಿಎ ಲಂಚ ಸಂಸದರಿಗೆ ಲಂಚ ನೀಡಿತ್ತು. ಈ ವಂಚನೆಯನ್ನು ಬಯಲಿಗೆಳೆದ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕಿತ್ತು~ ಎಂದು ಹೇಳಿದರು.