ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರರ ವ್ಯಾಖ್ಯಾನ ಅನುವಾದಕ್ಕೆ ಸಲಹೆ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವೇದಗಳನ್ನು ಅರ್ಥ­ಮಾಡಿ­ಕೊಳ್ಳಲು ಅಮೂಲ್ಯ­ವಾದ ವ್ಯಾಖ್ಯಾನಗಳನ್ನು ನೀಡಿದವರು ಶಂಕರಾ­ಚಾರ್ಯರು. ಅವರ ವ್ಯಾಖ್ಯಾನ­ಗಳ ಸರಿಯಾದ ಅನುವಾದ ಆಗಬೇಕಿದೆ’ ಎಂದು ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಹೇಳಿದರು.

ಸುರಭಾರತಿ ಸಂಸ್ಕೃತ ಮತ್ತು ಸಂಸ್ಕೃತಿ ಪ್ರತಿಷ್ಠಾನವು ನಗರದಲ್ಲಿ ಆಯೋಜಿಸಿರುವ ‘ಮಾರ್ಗಶೀರ್ಷೋ­ತ್ಸವ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂಗ್ಲಿಷ್‌, ಹಿಂದಿ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಶಂಕರಾ­ಚಾರ್ಯರ ವ್ಯಾಖ್ಯಾನಗಳು ಅನುವಾದ­ಗೊಂಡಿವೆ. ಆದರೆ, ಈ ಅನುವಾದಗಳು ಮೂಲ ಸಂಸ್ಕೃತ ವ್ಯಾಖ್ಯಾನದ ಸರಿಯಾದ ಅನುವಾದಗಳಲ್ಲ. ಹೀಗಾಗಿ ಸಂಸ್ಕೃತ ವ್ಯಾಖ್ಯಾನದ ಸರಿಯಾದ ಅನುವಾದಕ್ಕೆ ಪ್ರಾಜ್ಞರು ಮುಂದಾಗ­ಬೇಕು’ ಎಂದರು.

‘ವೇದಗಳನ್ನು ಅರ್ಥಮಾಡಿಕೊಳ್ಳದೆ ಭಾರತದ ಸಂಸ್ಕೃತಿಯನ್ನು ಸಂಪೂರ್ಣ­ವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತವು ಭಾರತದ ಆದಿಭಾಷೆ. ಸಂಸ್ಕೃತ ಭಾಷೆಯ ಅವಗಣನೆ­ಯಿಂದಾಗಿ ಅಮೂಲ್ಯವಾದ ಜ್ಞಾನ­ದಿಂದ ಮಕ್ಕಳು ವಂಚಿತರಾಗುವಂತಾ­ಗಿದೆ. ಹೀಗಾಗಿ ಮಕ್ಕಳಿಗೆ ಸಂಸ್ಕೃತ ಕಲಿಸುವುದು ಅಗತ್ಯ’ ಎಂದು ಹೇಳಿದರು.

‘ಮಠಗಳನ್ನು ಕಟ್ಟಿ ಜ್ಞಾನದ ಪ್ರಸಾರಕ್ಕೆ ಕಾರಣರಾದವರು ಶಂಕರಾ­ಚಾರ್ಯರು. ಆದರೆ, ಇಂದು ಕೆಲವು ಮಠಗಳ ಸ್ವಯಂಘೋಷಿತ ಸ್ವಾಮಿಗಳು ವಿವಾದಗಳಲ್ಲಿ ಸಿಲುಕಿದ್ದಾರೆ. ಇದರಿಂದ ಒಳ್ಳೆಯ ಕೆಲಸ ಮಾಡುವ ಮಠಗಳ ಬಗ್ಗೆಯೂ ಅನುಮಾನ ಮೂಡು­ವಂತಾ­ಗಿರು­ವುದು ವಿಪರ್ಯಾಸ’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಕೆ.ಎಲ್‌.­ಶ್ರೀನಿವಾಸನ್‌ ಮಾತನಾಡಿ, ‘ಸಂಸ್ಕೃತ ಭಾಷೆ ಹಾಗೂ ದೇಶದ ಸಂಸ್ಕೃತಿಯ ಪ್ರಸಾರಕ್ಕಾಗಿ ಪ್ರತಿಷ್ಠಾನ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.

ಮಾರ್ಗಶೀರ್ಷೋತ್ಸವದ ಅಂಗ­ವಾಗಿ ಜನವರಿ 15ರವರೆಗೂ ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT