ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಪುಸ್ತಕದಲ್ಲಿ ಮಹಾಪುರುಷರ ಚಿತ್ರವಿರಲಿ

Last Updated 1 ಜೂನ್ 2011, 8:20 IST
ಅಕ್ಷರ ಗಾತ್ರ

ಕುಕ್ಕುಂದೂರು (ಬಜಗೋಳಿ): ಶಾಲಾ ವಿದ್ಯಾರ್ಥಿಗಳು ಬರೆಯುವ ಪುಸ್ತಕಗಳ ಮುಖಪುಟದಲ್ಲಿ ಮಹಾ ಪುರುಷರ, ಚಾರಿತ್ರಿಕ ಮಹತ್ವಗಳ ಮತ್ತು ಐತಿಹಾಸಿಕ ಸಂಗತಿಗಳನ್ನು ನೆನಪು ಮಾಡುವ ಚಿತ್ರಗಳನ್ನು ಪ್ರಕಟಿಸಬೇಕು  ಎಂದು ಕಾರ್ಕಳ ತಾಲ್ಲೂಕು ಸನಾತನ ಸಂಸ್ಥೆಯ ಪ್ರಚಾರ ಸೇವಕಿ ಡಾ. ಶ್ರೀಕಲಾ ಜೋಷಿ ಸಲಹೆ ನೀಡಿದರು.

ತಾಲ್ಲೂಕಿನ ಕುಕ್ಕುಂದೂರು ಜಯಂತಿನಗರ ಹಿರಿಯ ಪ್ರಾಥಮಿಕ ಶಾಲೆಯ 85 ಮಂದಿ ವಿದ್ಯಾರ್ಥಿಗಳಿಗೆ ಸನಾತನ ಸಂಸ್ಥೆಯ ವತಿಯಿಂದ ನೀಡಲಾದ ನೋಟ್ ಪುಸ್ತಕಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.

ಚಲನಚಿತ್ರ ನಟ ನಟಿಯರು, ಕ್ರಿಕೆಟ್ ಆಟಗಾರರ ಚಿತ್ರಗಳನ್ನಷ್ಟೆ ಈಗ ಈ ಪುಸ್ತಕಗಳಲ್ಲಿ ನೋಡುವಂತಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನ ಒದಗಿಸುವ ಹಲವು ಅವಕಾಶಗಳನ್ನು ನಾವು ಸದುಪಯೋಗಪಡಿಸಿಲ್ಲ ಎಂದು ಅವರು ವಿಷಾದಿಸಿದರು.

ಸುಭಾಷಿತದ ಸಾಲುಗಳನ್ನು, ಸನ್ನಡತೆಯ ವಿಷಯಗಳನ್ನು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಮಹತ್ವದ ಅಂಶಗಳನ್ನು ಮುದ್ರಿಸುವುದು ಜಾಗೃತಿಗೆ ಬಲ ನೀಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು. ಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಸುಮಿತ್ರಾ ಆಚಾರ್ ಇದ್ದರು.

ಕುಂಜೂರು: ಬಾವಿಗೆ ಬಿದ್ದು ಸಾವು
ಪಡುಬಿದ್ರಿ:
ಆಕಸ್ಮಿಕವಾಗಿ ಕಾಲು ಜಾರಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜೂರು ಎಂಬಲ್ಲಿನ ಪಣಿಯೂರಿನಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಬೂದ ಶೆಟ್ಟಿ (55) ಎಂದು ಗುರುತಿಸಲಾಗಿದೆ.

ಅವರು ನೆರಮನೆಯ ವತ್ಸರಾವ್ ಎಂಬವರ ಅಡಿಕೆ ತೋಟದ ಬಾವಿಗೆ ಪಂಪ್‌ಸೆಟ್ ಜೋಡಿಸಿ ಹಿಂತಿರುಗಿ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿದರು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕ್ಕಿ: ಇಬ್ಬರಿಗೆ ಗಾಯ
ಬೈಂದೂರು:
ಇಲ್ಲಿನ ಜಾಮಿಯಾ ಮಸೀದಿ ಬಳಿ ಹೆದ್ದಾರಿಯಲ್ಲಿ ಭಾನುವಾರ ಬೈಕ್‌ಗೆ ಕಾರ್ ಡಿಕ್ಕಿಯಾಗಿ ಬೈಕ್ ಸವಾರರಿಗೆ ಗಾಯಗಳಾಗಿವೆ.ಬೈಂದೂರಿನಿಂದ ಉಪ್ಪುಂದದತ್ತ ಹೋಗುತ್ತಿದ್ದ ರಕೀಬ್ ಮತ್ತು ಮಾರೂಫ್ ಗಾಯಗೊಂಡವರು. ಎದುರಿನಿಂದ ಮಂಜುನಾಥ ದೇವಾಡಿಗ ಚಲಾಯಿಸಿಕೊಂಡು ಬಂದ ಕಾರು ಲಾರಿಯನ್ನು ಹಿಂದಿಕ್ಕಲು ಯತ್ನಿಸಿದಾಗ ಬೈಕ್‌ಗೆ ಡಿಕ್ಕಿ ಹೊಡೆಯಿತು. ಈ ಬಗ್ಗೆ ರಕೀಬ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT