ಬೆಂಗಳೂರು: ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ಅಗ್ನಿನಂದಕಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು.
ಇಲಾಖೆಯಿಂದ ಈ ಬಗ್ಗೆ ಈಗಾಗಲೆ ಸೂಚನೆ ನೀಡಿದ್ದರೂ ಹಲವಾರು ಶಾಲೆಗಳು ಇದನ್ನು ಪಾಲಿಸಿರುವುದಿಲ್ಲ. ಆದ್ದರಿಂದ ಅನುದಾನಿತ, ಅನುದಾನ ರಹಿತ ಶಾಲೆಗಳೂ ಸಹ ಈ ನೋಟೀಸನ್ನು ಪ್ರಕಟಿಸಿದ ದಿನಾಂಕದಿಂದ 15 ದಿನದ ಒಳಗಾಗಿ ಐ.ಎಸ್.ಐ. ಮಾರ್ಕ್ ಉಳ್ಳ ಉತ್ತಮ ಗುಣಮಟ್ಟ, ಸಾಮರ್ಥ್ಯದ ಅಗ್ನಿನಂದಕ ಉಪಕರಣವನ್ನು ಪ್ರತಿಯೊಂದು ಬ್ಲಾಕ್ಗೆ ಒಂದರಂತೆ ಅಳವಡಿಸಲು ಸೂಚಿಸಿದೆ. ತಪ್ಪಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಂತಿಮವಾಗಿ ಎಚ್ಚರಿಸಿದ್ದಾರೆ.