ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಸೋಮವಾರ ನಗರದ ಐಜೂರು ವೃತ್ತದಲ್ಲಿ ಮಾತನಾಡಿದ ಅವರು, `ಕರೇನಳ್ಳಿ ಸುತ್ತಮುತ್ತ ಕಸ ಸುರಿಯುವುದರಿಂದ ಪರಿಸರ ನಾಶವಾಗುತ್ತದೆ. ನಂತರದ ದಿನಗಳಲ್ಲಿ ಈ ಭಾಗಗಳ ಭೂಮಿಯ ಬೆಲೆ ಕಡಿಮೆಯಾಗುತ್ತದೆ. ಆಗ ರೈತರು ಬಂದಷ್ಟು ಹಣಕ್ಕೆ ತಮ್ಮ ಭೂಮಿಯನ್ನು ಮಾರಾಟ ಮಾಡುತ್ತಾರೆ. ಸುತ್ತಮುತ್ತಲ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಖರೀದಿ ಮಾಡಿದ ನಂತರ ಕಸ ಹಾಕುವ ಜಾಗವನ್ನು ಬೇರೆಡೆಗೆ ವರ್ಗಾಯಿಸುತ್ತಾರೆ. ನಂತರ ಇಲ್ಲಿನ ಭೂಮಿಗೆ ಕೋಟ್ಯಂತರ ಬೆಲೆ ಬರುತ್ತದೆ. ಆಗ ಭೂ ಮಾಲೀಕರು ತಮಗಿಷ್ಟ ಬಂದಷ್ಟು ಹಣವನ್ನು ಕೊಳ್ಳೆ ಹೊಡೆಯುವ ಉದ್ದೇಶ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಗುತ್ತಿಗೆದಾರರು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಸದ್ಯದಲ್ಲಿಯೇ ಇದರ ಸಂಪೂರ್ಣ ಅಂತರಾಳವನ್ನು ರಾಜ್ಯದ ಜನರ ಮುಂದಿಡುತ್ತೇನೆ' ಎಂದು ಹೇಳಿದರು.