ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 28-10-1961

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೆಚ್ಚು ತಾಂತ್ರಿಕ ನೆರವು, ಖಾಸಗಿ ಬಂಡವಾಳ
ನವದೆಹಲಿ, ಅ. 27
- ಅಮೆರಿಕದ ಹಿರಿಯ ಕೈಗಾರಿಕೋದ್ಯಮಗಳು ನಿನ್ನೆ ಪ್ರಧಾನಿ ನೆಹರೂ ಅವರೊಡನೆ 90 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಅಲ್ಲಿಗೆ ಈ ಕೈಗಾರಿಕೋದ್ಯಮಿಗಳು ಭಾರತಕ್ಕೆ ಯಾವ ಉದ್ದೇಶದಿಂದ ಬಂದಿದ್ದರೋ ಆ ಕಾರ್ಯ ಮುಗಿದಂತಾಯಿತು.

ಈ ಮಾತುಕತೆಯಿಂದ ಅಮೆರಿಕದ ವಾಣಿಜ್ಯೋದ್ಯಮಿಗಳಿಗೆ `ಬಹು ಸಂತೋಷ~ ವಾಯಿತೆಂದೂ ಮಾತುಕತೆ ನಡೆದಾಗಿನ ವಾತಾವರಣ ಸೊಗಸಾಗಿತ್ತೆಂದು ಈ ಕೈಗಾರಿಕೋದ್ಯಮಿಗಳ ವಕ್ತಾರರು ತಿಳಿಸಿದರು.

ಘಟಪ್ರಭಾದಿಂದ 53000 ಎಕರೆಗೆ ನೀರು
ನವದೆಹಲಿ, ಅ. 27
- ನಿರ್ಮಾಣ ವಾಗುತ್ತಿರುವ ಘಟಪ್ರಭಾ ಅಣೆಕಟ್ಟು ಯೋಜನೆಯಿಂದ ದ್ವಿತೀಯ ಯೋಜನೆಯ ಅಂತ್ಯದ ವೇಳೆಗೆ ಮೈಸೂರಿನ 53000 ಎಕರೆ ಜಮೀನಿಗೆ ನೀರೊದಗಿಸಲಾಯಿತೆಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಘಟಪ್ರಭಾ ಕಣಿವೆ ಪ್ರದೇಶದ ಅಭಿವೃದ್ಧಿ ಗುರಿಯುಳ್ಳ ಈ ಯೋಜನೆ ಮೊದಲ ಹಂತದ ಕಾರ್ಯ 44 ಮೈಲಿ ಉದ್ದದ ಎಡಭಾಗದ ನಾಲೆ ನಿರ್ಮಾಣವನ್ನೊಳಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT